ಸುರಪುರ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿರುವ ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿಗಳಾಗಿದ್ದ ಸಿದ್ಧರಾಮ ಸ್ವಾಮೀಜಿ (೭೮ ವರ್ಷ) ಲಿಂಗೈಕ್ಯರಾಗಿದ್ದು ನಗರದ ಸತ್ಯಂಪೇಟೆಯ ಅಪಾರ ಭಕ್ತರು ಶ್ರೀಗಳ ಲಿಂಗೈಕ್ಯಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಮೂಲತಃ ಸತ್ಯಂಪೇಟೆಯವರಾದ ಸಿದ್ಧಲಿಂಗ ಸ್ವಾಮೀಜಿಯವರು ೧೯೪೨ರ ಜೂನ್ ೨ ರಂದು ಸತ್ಯಂಪೇಟೆ ಗ್ರಾಮದಲ್ಲಿ ಜನಸಿ,ಇಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು.ನಂತರ ಯಡ್ರಾಮಿಯಲ್ಲಿನ ಮುರಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿಗಳಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.ಅಲ್ಲದೆ ಧರ್ಮ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದ ಶ್ರೀಗಳು ತಮ್ಮ ೭೮ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದು, ೨೭ನೇ ತಾರೀಖು ಮಂಗಳವಾರ ಮದ್ಹ್ಯಾನ ೧ ಗಂಟೆಗೆ ಯಡ್ರಾಮಿಯ ವೀರಕ್ತಮಠದ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಶ್ರೀಗಳ ಲಿಂಗೈಕ್ಯಕ್ಕೆ ಲೋಕ ಜನಶಕ್ತಿ ಪಕ್ಷದ ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ,ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಶರಣಪ್ಪ ಯಾಳಗಿ,ಸಿದ್ದಯ್ಯಸ್ವಾಮಿ ಮಠಪತಿ,ಶರಣಯ್ಯಸ್ವಾಮಿ ಮಠಪತಿ,ದೇವಿಂದ್ರಯ್ಯಸ್ವಾಮಿ ಕಲ್ಮಠ, ಶಿವಶರಣಪ್ಪ ಉಳ್ಳಿ,ಶಿವಾನಂದ ಕೆಂಭಾವಿ,ಮಹಾದೇವಪ್ಪ ಗಾಳೆನೂರ,ಮಂಜುನಾಥ ಹಿರೇಮಠ,ಶಿವರುದರ ಉಳ್ಳಿ,ಸಿದ್ಧು ಚೊಕ್ಕಾ,ಗುರುಲಿಂಗಪ್ಪ ಚೊಕ್ಕಾ,ಶರಬಣ್ಣ ಜಾಲಹಳ್ಳಿ ಸೇರಿದಂತೆ ಅನೇಕ ಭಕ್ತರು ಶೋಕ ವ್ಯಕ್ತಪಡಿಸಿದ್ದಾರೆ.