ಅನಾಥ ವೃದ್ಧ ದಂಪತಿಗಳಿಗೆ ಮುಖಂಡ ಮಲ್ಲು ಬಿಲ್ಲವ್ ನೆರವು

0
6

ಸುರಪುರ: ಸಂಕಷ್ಟದಲ್ಲಿರುವ ಸಿಂಧನೂರು ತಾಲೂಕಿನ ಗುಂಡ ಗ್ರಾಮದ ವೃದ್ಧ ದಂಪತಿಗಳಿಗೆ ನಗರದ ಕಾಂಗ್ರೆಸ್ ಯುವ ಮುಖಂಡರಾದ ಮಲ್ಲು ಬಿಲ್ಲವ್ ಹಸನಾಪುರ ಅವರು ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ವ್ಯಕ್ತಪಡಿಸಿ ೫ಸಾವಿರ ರೂ ಸಹಾಯಧನ ಹಾಗೂ ಕುಟುಂಬಕ್ಕೆ ದಿನಬಳಕೆ ಅಗತ್ಯ ವಸ್ತುಗಳನ್ನು ವಿತರಿಸಿದರು.

ಗುಂಡ ಗ್ರಾಮದ ವೃದ್ಧ ದಂಪತಿಗಳು ಸಂಕಷ್ಟದಲ್ಲಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ನೋಡಿದ ಯುವ ಮುಖಂಡ ಮಲ್ಲು ಬಿಲ್ಲವ್ ಅವರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಲ್ಲದೆ ಸಹಾಯದ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ, ಯುವ ಮುಖಂಡ ಮಲ್ಲು ಬಿಲ್ಲವ್ ಅವರ ಕಾರ್ಯಕ್ಕೆ ನಗರದ ಮುಖಂಡರು ಹಾಗೂ ಅಭಿಮಾನಿಗಳು ಪ್ರಶಂಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here