ಸುರಪುರ: ಕೋವಿಡ್ ಭೀತಿಯ ಮದ್ಯೆಯು ನಗರದ ವಿವಿಧೆಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.ನಗರದ ಹುಲಕಲ್ ಗುಡ್ಡ,ದೇವರಬಾವಿ ಬಳಿಯ ಈಶ್ವರ ಮಂದಿರ,ರಂಗಂಪೇಟೆಯ ಕರೆಗಾರ ಓಣಿ,ರುದ್ರಸ್ವಾಮಿ ಮಠದ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆಗಳ ಧರಿಸಿ ನಾಗ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ,ಕೊಬ್ಬರಿಯ ಮೂಲಕ ಹಾಲನ್ನು ಎರೆದರು ಅಲ್ಲದೆ ನೈವೇದ್ಯವನ್ನು ಅರ್ಪಿಸಿ ತಾವೂ ನೈವೇದ್ಯವನ್ನು ಸ್ವೀಕರಿಸಿದರು.
ಹುಲಕಲ್ ಗುಡ್ಡದ ಮೇಲೆ ಇರುವ ನಾಗ ದೇವರ ಬಳಿಯಲ್ಲಿ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರು.ಅಲ್ಲದೆ ನೈವೇದ್ಯ ಸ್ವೀಕರಿಸಿ ಜೊತೆಗೆ ಮಕ್ಕಳಿಗೆ ಕೊಬ್ಬರಿಯ ಆಟ ಆಡಲು ನೀಡುವುದರ ಜೊತೆಗೆ ಜೋಕಾಲಿ ಆಡಿ ಖುಷಿಪಟ್ಟರು.
ಇದೇ ಸಂದರ್ಭದಲ್ಲಿ ಮಾತಾಶ್ರಯ ಅನಾಥಾಶ್ರಮದ ಮಕ್ಕಳು ಕೂಡ ನಾಗರ ಪಂಚಮಿ ಹಬ್ಬದ ಅಂಗವಾಗಿ ನಾಗ ದೇವರಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು.