ಕಾಂಗ್ರೆಸ್ ಪಕ್ಷ ಬುದ್ದ ಬಸವ ಅಂಬೇಡ್ಕರರ ಸಿದ್ದಾಂತದ ತಳಹದಿ: ಶಾಸಕ ಪ್ರಿಯಾಂಕ್ ಖರ್ಗೆ

0
25

ಕಲಬುರಗಿ: ಬಸವ ತತ್ವದ ಹಿನ್ನೆಲೆಯ ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತದೆ. ಹಾಗಾಗಿ ಸಮಾನತೆ, ಸಹೋದರತೆಯ ಮೇಲೆ ನಂಬಿಕೆಯಿರುವ ಹಲವಾರು ಪ್ರಮುಖ ನಾಯಕರು ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಜಿ ಸಚಿವರಾದ,‌ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಸವರಾಜ್ ನಾಶಿ ಹಾಗೂ ಭಾಗಾರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಅವರು ಮಾತನಾಡಿದರು.

Contact Your\'s Advertisement; 9902492681

ಬಸವರಾಜ್ ನಾಶಿ ಹಾಗೂ‌ ಭಾಗಾರೆಡ್ಡಿ ಅವರು ನಮ್ಮ ಪಕ್ಷಕ್ಕೆ ಸೇರಿದ್ದು ಆನೆಬಲ ಬಂದಂತಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ದಿಯಾಗಬೇಕಾದರೆ‌ ಎಲ್ಲ ಹಂತಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ‌ ಬರಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಎಂದರೆ ಹಾಗೂ ಬಿಜೆಪಿ‌ಸರ್ಕಾರಕ್ಕೆ‌ ಕಲ್ಯಾಣ ಕರ್ನಾಟಕ ಅಂದರೆ ಅಲರ್ಜಿಯಾಗಿದೆ. ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಸರ್ಕಾರ ಮಾಡಿರುವ ಅನ್ಯಾಯ ಹಾಗೂ ಜನರ ಕಡೆಗಣನೆ‌ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ನಾಯಕರು ಬಂದರೆ ವಿವವರಾಗಿ ಚರ್ಚಿಸುವುದಾಗಿ ಆವ್ಹಾನ ನೀಡಿದರು.

ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಕಲಬುರಗಿ ನಗರದ ಜನರು ಶಾಂತಿ ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ಇಲ್ಲದಾಗಿದ್ದು, ನಾಗರಿಕರು ತಮಗೆ ಬೇಕಾಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ನಾಗರಿಕರಿಗೆ ಅಗತ್ಯ ಸೌಲಭ್ಯ‌‌ ಒದಗಿಸಲಾಗುವುದು‌ ಎಂದರು.

ಮಾಜಿ ಸಚಿವ ಹಾಗೂ ಶಾಸಕರಾದ ಯು.ಟಿ.ಖಾದರ್ ಮಾತನಾಡಿ‌ ಕಲಬುರಗಿ ಜಿಲ್ಲೆ ಮಹಾನ್ ನಾಯಕರನ್ನು ರಾಜ್ಯಕ್ಕೆ‌ ಕೊಡುಗೆ ನೀಡಿದೆ. ಹಿರಿಯ ನಾಯಕರಾದ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ‌ ಖರ್ಗೆ,‌ ಮಾಜಿ‌ ಸಿಎಂ ದಿವಂಗತ ಎನ್ ಧರಂಸಿಂಗ್ ಹಾಗೂ ದಿವಂಗರಲತ ಖಮರುಲ್‌ ಇಸ್ಲಾಂ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಿಷ್ಠ ವಾಗಿದೆ.

ಜಾತ್ಯಾತೀತ ತತ್ವದ ಅಡಿಪಾಯದಲ್ಲಿ ನಡೆಯುವ ಆಡಳಿತ‌ ಇದ್ದಲ್ಲಿ ಮಾತ್ರ ಅಭಿವೃದ್ದಿಯಾಗುತ್ತದೆ. ಬಿಜೆಪಿಗೆ ಯಾವುದೇ ಸಿದ್ದಾಂತಗಳಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ವಿರೋಧಪಕ್ಷದ‌ ನಾಯಕರಾದ ಎಸ್ ಆರ್ ಪಾಟೀಲ್ ಮಾತನಾಡಿ ಸ್ಥಳೀಯ ಸಂಸ್ಥೆಯ‌ ಚುನಾವಣೆ ಪ್ರಮುಖವಾಗಿದ್ದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಕರೆ‌ನೀಡಿದರು.

ಕಲಬುರಗಿ ಮಹಾನಗರ ಪಾಲಿಕೆಯ‌ ಚುನಾವಣೆ ಮುಂಬರುವ ತಾಲೂಕು ಹಾಗೂ ಜಿಲ್ಲಾಪಂಚಾಯತ, ವಿಧಾನಸಭೆ ಹಾಗೂ‌ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು 2023 ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ‌ ಬರಲಿದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಕ್ಕೆ ಸೇರ್ಪಡೆಯಾದ ಬಸವರಾಜ್ ನಾಶಿ ಹಾಗೂ ಭಾಗಾರೆಡ್ಡಿ ಮಾತನಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದರು.

ರಾಜ್ಯ ಸಭಾ ಸದಸ್ಯರಾದ ಬಿ.ಸಿ. ಚಂದ್ರಶೇಖರ್, ವಿಧಾನಪರಿಷತ್ ವಿರೋಧಪಕ್ಷದ‌ ನಾಯಕರಾದ ಎಸ್ ಆರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ್, ಶಾಸಕರಾದ ಎಂ.ವೈ.ಪಾಟೀಲ್, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಖನಿಜಾ ಫಾತೀಮಾ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಎಚ್ ಕೆ ಇ ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here