ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಪ್ರಯುಕ್ತ ಇಂದು ನಗರದ ಗ್ರಾಂಡ್ ಹೋಟೆಲ್ ನಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ್ ನಿರಾಣಿ ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿ ಕಲಬುರಗಿ ನಗರ ಸ್ಮಾರ್ಟ್ ಸಿಟಿ, ಹಾಗೂ ಗ್ರೀನ್ ಸಿಟಿ ಸೇರಿದಂತೆ 15 ವಿವಿಧ ಅಂಶಗಳನ್ನು ಒಳಗೊಂಡಂತೆ ಭರವಸೆ ಈಡೇರಿಕೆಸುವ ಪ್ರಣಾಳಿಕೆ ಪಾಲಿಕೆ ಪ್ರಣಾಳಿಕೆ ಉಲ್ಲೇಖಿಸಲಾಗಿದೆ.
836 ಕೋ.ರೂ 24*7 ಕುಡಿಯುವ ನೀರು, ಮನೆಗಳಿಗೆ ಪೈಪ್ ಲೈನ್ ಮುಲಕ ಅಡುಗೆ ಅನಿಲ ಸಂಪರ್ಕ, ಮಹಾತ್ಮ ಗಾಂಧಿ ನಗರ ವಿಕಾಸ 500 ಕೋಟಿ ವಿಶೇಷ ಅನುದಾನ, ರಸ್ತೆ,ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಈಡೇರಿಕೆಗಳು ಪ್ರಮುಖವಾಗಿವೆ.
ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ, ಅವಿನಾಶ್ ಜಾಧವ್, ರಾಜಕುಮಾರ ಪಾಟೀಲ್ ತೇಲ್ಕೂರು, ಶಾಸಕ ಮತ್ತಿಮುಡ್, ಶಶೀಲ್ ಜಿ ನಮೋಶಿ, ಅಮರನಾಥ್ ಪಾಟೀಲ್, ಸಿದ್ದಾಜಿ ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಇದ್ದರು.