ಆಳಂದ: ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾ ಗ್ರಾಮದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಹಾಗೂ ನೈರ್ಮಲ್ಯ ಕಾಮಗಾರಿಗೆ ೧.೬೫ಕೋಟಿ ಹಾಗೂ ನಿಂಬರಗಾ ತಾಂಡಾದಲ್ಲಿ ೬೦ ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಅವರು ಗುದ್ದಲಿ ಪೂಜೆ ಕೈಗೊಂಡರು.
ಬಳಿಕ ಮಾತನಾಡಿದ ಅವರು, ಈ ಕಾಮಗಾರಿಯಿಂದ ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಆಗದು. ಸಮರ್ಪವಾಗಿ ಸಕಾಲಕ್ಕೆ ಕಾಮಗಾರಿ ನಡೆದು ಜನರಿಗೆ ಅನುಕೂಲ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಾತಣ್ಣಾ ಮಂಟಕಿ, ಮುಖಂಡ ರಾಜಶೇಖರ ಮಲಶೆಟ್ಟಿ, ಶ್ರೀಶೈಲ ಮಾಲಿ ಪಾಟೀಲ, ಅಮೃತ ಬಿಬ್ರಾಣಿ, ಮಹಾಂತೇಶ ಬಿರಾದಾರ, ಬಸಯ್ಯ ಗುತ್ತೇದಾರ, ರಾಜು ಸಿಂಗೆ, ಲಕ್ಷ್ಮೀಕಾಂತ ದುಗೊಂಡ, ಬಸವರಾಜ ಯಳಸಂಗಿ, ಮಲ್ಲಿನಾಥ ಒಡೆಯರ್, ಮೋಹನ್, ಮಹಾದೇವ ಹೂಗಾರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.