ಕಲಬುರಗಿ: ಜೇವರ್ಗಿ ತಾಲ್ಲೂಕಿನ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡದ ಕಟ್ಟಾಳು ದಿವಂಗತ ಶಾಂತಪ್ಪ ಪಾಟೀಲ್ ನರಿಬೋಳ್ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ಶಾಂತ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಾಕ್ರಮ 12 ರಂದು ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಪಾಟೀಲ್ ನರಿಬೋಳ್ ತಿಳಿಸಿದ್ದಾರೆ.
ಅಂದು ನಗರದ ಪತ್ರಿಕಾ ಭವನದಲ್ಲಿ 5 ಗಂಟೆಗೆ ಸಮಾರಂಭ ಜರುಗಲಿದ್ದು, ಈ ಬಾರಿ ಸಾಹಿತಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿರುವುದೆಂದು ಯಾದಗಿರಿ ಕಲಬುರಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಮತ್ತು ಹೈದ್ರಾಬಾದ್ ಕರ್ನಾಟಕ ಛೆಂಬರ್ ಆಫ಼್ ಕಾಮರ್ಸ್ ನಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಅಮರನಾಥ್ ಪಾಟೀಲ್ ರನ್ನು ಶಾಂತ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಿವಂಗತ ಶಾಂತಪ್ಪ ಪಾಟೀಲ್ ನರಿಬೋಳ್ ಅವರ ಎಂಟನೇ ಪುಣ್ಯ ಸ್ಮರಣೆ ನಿಮಿತ್ಯ ಹಮ್ಮಿಕೊಂಡಿರುವ ಸಮಾರಂಭ ದಲ್ಲಿ ಶಾಂತ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಪೂಜ್ಯ ಶ್ರೀ ಅಪ್ಪಾರಾವ್ ದೇವಿ ಮುತ್ಯಾ ಶ್ರೀನಿವಾಸ ಸರಡಗಿ ಶಕ್ತಿಪೀಠದ ಪೀಠಾಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೆಲೋಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಶರಣ್ ಬಿ ಪಾಟೀಲ್, ಚರ್ಮರೋಗ ತಜ್ಞ ಡಾ ಅಂಬರೀಶ್ ಬಿರಾದಾರ್, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಹೇಶ್ವರಿ ವಾಲಿ ಭಾಗವಹಿಸುವವರು ಎಂದು ಶಾಂತಪ್ಪ ಪಾಟೀಲ್ ನರಿಬೊಳ್ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.