ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿ: ವಿಜಯಕುಮಾರ

0
86

ಶಹಾಬಾದ: ಮುಂಬರುವ ತಾಪಂ,ಜಿಪಂ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ಎಲ್ಲಾ ಕಾರ್ಯಕರ್ತರ ಮುಖಂಡರ ಗುರಿಯಾಗಬೇಕೆಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಹೇಳಿದರು.

ಅವರು ಸೋಮವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಶಹಾಬಾದನಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ.ಯಾವಾಗಲೂ ಪಕ್ಷಕ್ಕೆ ಹೆಚ್ಚಿನ ಲೀಡ್ ನೀಡಿರುವ ಪ್ರದೇಶ.ಇಲ್ಲಿನ ಕಾರ್ಯಕರ್ತರು ಕ್ರೀಯಾಶೀಲರಾಗಿದ್ದಾರೆ.ಅಲ್ಲದೇ ನಗರಸಭೆಯ ೨೭ ಸದಸ್ಯರಲ್ಲಿ ೨೨ ಜನ ಸದಸ್ಯರು ಕಾಂಗ್ರೆಸ್ ಪಕ್ಷದಿಂದಲೇ ಗೆಲುವು ಸಾಧಿಸಿ ನಗರಸಭೆಯ ಚುಕ್ಕಾಣಿಯನ್ನು ಪಡೆದುಕೊಂಡಿದೆ.

Contact Your\'s Advertisement; 9902492681

ಮೊದಲಿನಿಂದಲೂ ಇಲ್ಲಿ ಹೆಚ್ಚಿನ ಮತವನ್ನು ಪಕ್ಷ ಪಡೆದುಕೊಂಡು ಬಂದಿದೆ. ಮುಂಬರುವ ತಾಪಂ,ಜಿಪಂ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಲಿ, ನಿಮ್ಮ ನಿಮ್ಮ ನಗರಸಭೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾವ ರೀತಿ ತಂತ್ರ ಅನುಸರಿಸಿದಿರೋ ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ತಮ್ಮದು ಎಂದು ಹೇಳಿದರು.

ಶಹಾಬಾದ ಬ್ಲಾಕ್ ಕೆಪಿಸಿಸಿ ಉಸ್ತುವಾರಿ ರಾಜಾಮೈನೋದ್ದಿನ್ ಜಮಾದಾರ ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕು. ಪಕ್ಷವನ್ನು ಸಂಘಟನೆ ಮಾಡಲು ಅನೇಕ ರೂರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ಪಕ್ಷದ ಸಂಘಟನೆ ಮಾಡುವ ಮೂಲಕ ೨೦೨೩ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ಬರಲು ಪ್ರಯತ್ನಿಸಬೇಕೆಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಎಪಿಎಮ್‌ಸಿ ಸದಸ್ಯ ವಿಶ್ವರಾಧ್ಯ ಬೀರಾಳ ವೇದಿಕೆಯ ಮೇಲಿದ್ದರು.

ಮೃತ್ಯುಂಜಯ್ ಹಿರೇಮಠ, ಇನಾಯತಖಾನ ಜಮಾದಾರ,ಡಾ.ಅಹ್ಮದ್ ಪಟೇಲ್, ಮಹ್ಮದ್ ಬಾಕ್ರೋದ್ದಿನ್, ರಾಜೇಶ ಯನಗುಂಟಿಕರ್,ಕಿರಣಬಾಬು ಕೋರೆ,ಮೆಹಬೂಬ,ಶ್ರವಣಕುಮಾರ, ಶರಣು ಪಗಲಾಪೂರ,ಸೂರ್ಯಕಾಂತ ಕೋಬಾಳ,ನಾಗೇಂದ್ರ ನಾಟೀಕಾರ,ಮ.ಇಮ್ರಾನ್, ಮುನ್ನಾ ಪಟೇಲ್,ರಾಜು ಮೇಸ್ತ್ರಿ, ಅವಿನಾಶ ಕಂಬಾನೂರ, ನಾಗರಾಜ ಕರಣಿಕ, ಶಿವಕುಮಾರ ನಾಟೀಕಾರ, ರಾಕೇಶ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here