ಸ್ವಾಭಿಮಾನದ ಶರಣ ಚಳವಳಿ: ಬೇಲಿಮಠದ ಶ್ರೀ: ಗದಗ ತೋಂಟದ ಶ್ರೀಗಳಿಗೆ ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ

0
14

ಕಲಬುರಗಿ: ಸಮಾಜದಲ್ಲಿ ವಿನಾಕಾರಣ ಗದ್ದಲ, ಗೊಂದಲ ಉಂಟು ಮಾಡದೆ ಬಸವಾದಿ ಶರಣರ ವಿಚಾರಗಳನ್ನು ಅವರ ಜೀವನ ಸಿದ್ಧಾಂತಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಜನ ಸಾಮಾನ್ಯರಿಗೆ ತಲುಪಿಸುತ್ತಿರುವ ನಾಡಿನ ಏಕೈಕ ಸಂಸ್ಥೆ ಬಸವ ಸಮಿತಿ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ನುಡಿದರು.

ಇಲ್ಲಿನ ಜಯ ನಗರದ ಅನುಭವ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ, ಗ್ರಂಥ ಲೋಕಾರ್ಪಣೆ ಮತ್ತು ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೨೦೨೧ನೇ ಸಾಲಿನ ಪ್ರಶ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಶಸ್ತಿಯು ಶ್ರೀಮಠದ ವತಿಯಿಂದ ಲಿಂಗಾಯತ ಅಧ್ಯಯನ ಸಂಸ್ಥೆ ಸ್ಥಾಪಿಸಿದ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದರು.

Contact Your\'s Advertisement; 9902492681

ಸಾನ್ನಿಧ್ಯ ವಹಿಸಿ ಗ್ರಂಥ ಲೋಕಾಪಣೆ ಮಾಡಿದ ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯು ಸರ್ಕಾರ ಇಲ್ಲವೇ ಆಡಳಿತದ ಯಾವುದೇ ಭಾಗ್ಯಗಳಿಗೆ ಕೈ ಚಾಚುವಂತಿರಲಿಲ್ಲ. ಪ್ರತಿಯೊಬ್ಬರಲ್ಲಿಯೂ ಆತ್ಮವಿಸ್ವಾಸ ಹಾಗೂ ಸ್ವಾಭಿಮಾನ ಮೂಡಿಸುವ ಚಳವಳಿಯಾಗಿತ್ತು ಎಂದು ವಿವರಿಸಿದರು. ಇಂದು ಲೋಕಾರ್ಪಣೆಗೊಂಡಿರುವ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ಚರಿತ್ರೆ, ಹರಿಹರನ ಶರಣ ರಗಳೆಗಳು, ವ್ಯಕ್ತಿತ್ವ ವಿಕಸನ ವಚನ ಚಿಂತನಗಳು, ಶರಣಗಣ ಸಹಸ್ರ ನಾಮವಳಿ (ಡಾ. ವೀರಣ್ಣ ದಂಡೆ), ಶರಣತತ್ವ ವಿವಚನೆ (ಪ್ರೊ. ಬಿ. ವಿರೂಪಾಕ್ಷಪ್ಪ) ಕನ್ನಡದ ಮಹತ್ವದ ಕೃತಿಗಳು ಎಂದು ತಿಳಿಸಿದರು.

ಮಾಜಿ ರಾಷ್ಟ್ರಪತಿ ಬಿ.ಡಿ. ಜತ್ತಿಯವರ ಕುರಿತು ಲೋಕಸಭೆಯ ಮಾಜಿ ಸದಸ್ಯ ಐ.ಜಿ. ಸನದ ಮಾತನಾಡಿದರು. ಇದೇ ವೇಳೆಯಲ್ಲಿ ೨೦೧೯-೨೦ನೇ ಸಾಲಿನ ಅಕ್ಕ ಮಹಾದೇವಿ ಪ್ರಶಸ್ತಿ ಪುರಸ್ಕೃತರಾದ ಡಾ. ಜಯಶ್ರೀ ದಂಡೆ ಅವರನ್ನು ಸನ್ಮಾನಿಸಲಾಯಿತು. ಬಿ.ಡಿ. ಜತ್ತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಡಾ. ವೀರಣ್ಣ ದಂಡೆ ಪುಸ್ತಕಗಳ ಕುರಿತು ಮಾತನಾಡಿದರು.

ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಬಸವ ಸಮಿತಿ ಉಪಾಧ್ಯಕ್ಷ ಪ್ರಭುದೇವ ಚಿಟಗೇರಿ ವೇದಿಕೆಯಲ್ಲಿದ್ದರು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರಸ್ತಾವಿಕ ಮಾತನಡಿದರು. ಕಲ್ಬುರ್ಗಿ ಬಸವ ಸಮಿತಿ ಅರ್ಧಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು.

ಭುವನೇಶ್ವರಿ ಸ್ವಾಗತಿಸಿದರು. ಡಾ. ಆನಂದ ಸಿದ್ಧಾಮಣಿ ವಂದಿಸಿದರು. ಎಸ್.ವಿ. ಹತ್ತಿ. ಡಾ. ಕೆ.ಎಸ್. ವಾಲಿ, ಬಂಡಪ್ಪ ಕೇಸೂರ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಗಣಪತಿ ಸಿನ್ನೂರ, ವಿಜಯಲಕ್ಷ್ಮೀ ಕೋಸಗಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here