ಕಲಬುರಗಿ : ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಭಾನುವಾರ ಜರುಗಿದ ಗುಲಬರ್ಗಾ ವೀರಶೈವ ಲಿಂಗಾಯತ ಸರಕಾರಿ, ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ ೧೬ನೇ ವಾರ್ಷಿಕ ಮಹಾಸಭೆ ಸಮಾರಂಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಸಂಘದ ಅಧ್ಯಕ್ಷರಾದ ಗುರುಬಸಪ್ಪ ಪಾಟೀಲ, ಶಿವಶರಣಪ್ಪ ಕೋಳಾರ, ಪ್ರಭು ಎಸ್. ಅವಂಟಿ, ಬಸಪ್ಪ ಸಿ. ಶೆಟ್ಟರ, ಶಿವಶರಣಪ್ಪ ದೇಗಾಂವ, ಅರುಣಕುಮಾರ ಪಾಟೀಲ, ಮಲ್ಲಿನಾಥ ಮಂಗಲಗಿ, ಅಣ್ಣಾರಾವ ಹಾಬಾಳಕರ್ ವೀರೇಶ ಮಾಲಿಪಾಟೀಲ, ಡಾ. ಶ್ರೀಶೈಲ ಘೂಳಿ, ಶಶೀಧರ ಮಾನಕರ, ಅರುಣಕುಮಾರ ಪಾಟೀಲ, ಶಿವಲಿಂಗಪ್ಪ ಭಂಡಕ, ಪ್ರಭುದೇವ ಎಂ.ಎಸ್., ಈರಮ್ಮ ಗೊಬ್ಬೂರ, ಸುವರ್ಣಾ ಎಸ್. ಶೆಟ್ಟಿ, ಶೋಭಾ ಮುಕರಂಬಿ ಮತ್ತಿತರರು ಇದ್ದರು.