ದಲಿತ ಮಹಿಳೆಯ ಬೆಂಕಿ ಹಚ್ಚಿ ಕೊಂದ ಕಾಮುಕರ ಕೃತ್ಯಕ್ಕೆ: ಅಷ್ಠಗಿ ತೀವ್ರ ಖಂಡನೆ

0
115

ಕಲಬುರಗಿ: ಯಾದಗಿರಿ ಜಿಲ್ಲೆಯ ಚೌಡೇಶ್ವರಿಹಾಳ ಗ್ರಾಮದ ಪಾಲಮ್ಮ ಮರೆಪ್ಪ ಎಂಬ ದಲಿತ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಿದ ಸ್ವಾಭಿಮಾನಿ ಮಹಿಳೆಯ ಅತ್ಯಾಚಾರಗೈದು, ಪೆಟ್ರೋಲ ಸುರಿದು ಬೆಂಕಿ ಹಚ್ಚಿ ಕೊಂದ ಕಾಮುಕರ ಅಮಾನವೀಯ ಕೃತ್ಯಕ್ಕೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ತೀವ್ರವಾಗಿ ಖಂಡಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೋಲೀಸ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಅಮಾಯಕರು ಮತ್ತು ಅಸಹಾಯಕ ಮಹಿಳೆಯರು ಕಾಮುಕರಿಗೆ ಬಲಿಯಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಪೋಲೀಸ ಅಧಿಕಾರಗಳು ನಿರ್ದಾಕ್ಷಿಣ್ಯವಾಗಿ ಕಾಮುಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ತಪ್ಪಿತಸ್ಥ ಅಧಿಕಾರಗಳನ್ನು ಸೇವೆಯಿಂದ ಅಮಾನತ್ತುಗೋಳಿಸಬೇಕು.

Contact Your\'s Advertisement; 9902492681

ಅತ್ಯಾಚಾರಕ್ಕೆ ಗುರಿಯಾಗಿ ಜೀವಂತವಾಗಿ ದಹನಗೋಂಡ ಪಾಲಮ್ಮ ಮರೆಪ್ಪ ಅವರ ಕುಟುಂಬ ವರ್ಗದವರಿಗೆ ಸರ್ಕಾರಿ ನೌಕರಿ ಹಾಗೂ ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಅಂಬಾರಾಯ ಅಷ್ಠಗಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here