ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಚಿಂಚೋಳಿ ಬಿಜೆಪಿ

0
35

ಚಿಂಚೋಳಿ: ತಾಲೂಕಿನ ಜಿಲಾವರ್ಷ ಗ್ರಾಮದ ಮಲ್ಲರೆಡ್ಡಿ ಹಾಗೂ ಗ್ರಾಪಂ ಸದಸ್ಯ ಡಾ. ಬಾಬು ಸಂಸದರ ಸಮಕ್ಷದಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ್ ಮಲಿ ತಿಳಿಸಿದ್ದಾರೆ.

ಅವರು ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಾದ ಮಧುಸೂದನ್ ರೆಡ್ಡಿ ಕಲ್ಲೂರ್ ಇಂದು ಜಿಲ್ವರ್ಷಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸಂಸದರ ಹಿಂಬಾಲಕರು ಬಿಜೆಪಿ ಪಕ್ಷದ ಧ್ವಜ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಬಾಸಿತ್,ಚಿರಂಜೀವಿ ಕುಂಚವರಾಂ, ನರಸೀಮಲು ಕುಂಬಾರ್, ಜನಾರ್ಧನ್ ಪಾಟೀಲ್, ರಾಮುಲು ಶಾದಿಪುರ, ಜನಾರ್ಧನ್ ಕುಂಚವರಾಂ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here