ಪ್ರತಾಪ್ ಸಿಂಹ ಬದ್ಧತೆ ಇಲ್ಲದ ಸಂಸದ : ಡಾ. ವಿಶಾಲ್ ಸಜ್ಜನ

0
134

ಕಲಬುರಗಿ: ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿ ಕರೆದು ಚಿತ್ತಾಪೂರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ಅವರಿಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಡಾ. ವಿಶಾಲ್ ಸಜ್ಜನ ಎಚ್ಚರಿಕೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವುದಕ್ಕೆ ಪ್ರತಾಪ್ ಸಿಂಹನಿಗೆ ಏನು ನೈತಿಕತೆ ಇದೆ? ಸ್ವಂತ ಹೆಂಡತಿಯನ್ನೇ ತಂಗಿ ಎಂದು ಹೇಳಿ ಬೆಂಗಳೂರಿನಲ್ಲಿ ಸರ್ಕಾರಿ ಸೈಟ್ ತೆಗೆದುಕೊಂಡವರು ಇವರು. ಪ್ರತಾಪ್ ಸಿಂಹ ಅವರಿಗೆ ತಂಗಿ ಬೆಲೆನೂ ಗೊತ್ತಿಲ್ಲ ಹೆಂಡತಿ ಬೆಲೆಯೂ ಗೊತ್ತಿಲ್ಲದವರೂ ಇನ್ನೊಬ್ಬರ ಹೆಸರ ಬಗ್ಗೆ ಮಾತಾಡುತ್ತಾರೆ. ಪ್ರಿಯಾಂಕ್ ಅನ್ನುವ ಶಬ್ದ ಕನ್ನಡ ಶಬ್ದ ಕೋಶದಲ್ಲಿ ನೋಡಿ ಈ ಹೆಸರಿನ ಬಗ್ಗೆ ಪ್ರತಾಪ್ ಸಿಂಹ ಮಾತನಾಡಲಿ ಎಂದು ಡಾ. ವಿಶಾಲ ಸಜ್ಜನ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here