ಚಿಂಚೋಳಿ: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ತಾಯಿ ನಿಧನಕ್ಕೆ ಇಂದು ಪಟ್ಟಣದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಪ್ರಕೃತಿ ಕರುಣಿಸಲಿ ಎಂದು ಚಿಂಚೋಳಿ ಬಹುಜನ ಸಮಾಜ ಪಾರ್ಟಿ – ಕರ್ನಾಟಕ ತೀವ್ರ ಸಂತಾಪಗಳನ್ನು ಸೂಚಿಸದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಅಣ್ಣಾ ಗೌತಮ್ ಬೋಮ್ನಳ್ಳಿ, ತಾಲೂಕ ಅಧ್ಯಕ್ಷರಾದ ವೈಜನಾಥ್ ಮಿತ್ರಾ, ಕೆ ಮಹೇಶ್, ಯಲ್ಲಾಲಿಂಗ, ಸಂಜುಕುಮಾರ್,ಅಕ್ಷಯ್, ಅಜಾರೋದ್ದಿನ್, ಚಂದ್ರಶೇಖರ,ಶರಣು,ರಮೇಶ್ ಇನ್ನಿತರರು ಇದ್ದರು.,