ಕಲಬುರಗಿ: ನಗರದ ಆಳಂದ ಚಕ್ ಪೋಸ್ಟ್ ಹತ್ತಿರ ನೂತನ ಎನ್.ಜೆ ಕಲಬುರಗಿ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಪೂಜ್ಯ ಶ್ರೀ ಜಗದ್ಗರು ಸಾರಂಗ ಮಠ ಶ್ರೀಶೈಲ ಹಾಗೂ ಸುಲಫುಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಯವರ ೪೦ ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ನಿಡುಮಾಮಿಡಿ ಸ್ವಾಮೀಜಿಯವರು, ಮುರಘಂದ್ರ ಶ್ರೀಗಳು, ರಾಜಶೇಖರ ಸ್ವಾಮೀಜಿ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಶಾಸಕ ಡಾ. ಅಜಯಸಿಂಗ್, ವಿ.ಪ ಸದಸ್ಯ ಬಿ.ಜಿ ಪಾಟೀಲ್, ಕಲ್ಯಾಣ ಮಂಟಪದ ಮಾಲಿಕ ಗೌಸ್ ಬಾಬಾ, ಚಂದು ಪಾಟೀಲ್, ಅಮರನಾಥ ಪಾಟೀಲ್, ಅರುಣಕುಮಾರ ಪಾಟೀಲ್, ಶರಣು ಮೋದಿ, ರಾಜು ಲೇಂಗಟಿ ಸೇರಿದಂತೆ ಇನ್ನಿತರರಿದ್ದರು.