ಸಿಸಿ ರಸ್ತೆ, ಕಾಲುವೆ ಕಾಮಗಾರಿ ಸಂಪೂರ್ಣ ಕಳಪೆ: ಯಾಕಾಪೂರ್

0
18

ಚಿಂಚೋಳಿ: ತಾಲೂಕಿನ ಗುರಂಪಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯ ಗ್ರಾಮ ವಿಕಾಸ್ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಸಿ ಸಿ ರಸ್ತೆ ಮತ್ತು ಕಾಲುವೆ ಕಾಮಗಾರಿ ಕಪ್ಪು ಮರಳು ಮಿಶ್ರಿತ ಮಾಡಿ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿಕೆಯಾಗಿದೆ ಎಂದು ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಯಾಕಾಪೂರ್ ಹೇಳಿದ್ದಾರೆ.

ಗ್ರಾಮದಲ್ಲಿ ಸರಿಯಾಗಿ ಅಂದಾಜು ಪಟ್ಟಿಯಂತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಶಾಸಕರ ಮತ್ತು ಅಧಿಕಾರಿಗಳ ಮತ್ತು ಶಾಸಕರ ಹಿಂಬಾಲಿಗರಾದ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕಾಮಗಾರಿ ಸಂಪೂರ್ಣ ಕಳಪೆ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ನಾಗಿಂದ್ರಪ್ಪ ಗುರಂಪಳ್ಳಿ, ರೇವನಸಿದ್ದಪ್ಪ ಗುರಂಪಳ್ಳಿ, ಕುಪೇಂದ್ರ, ಇಸ್ಮಾಯಿಲ್, ಐಮತ್ ಅಲಿ, ಸಂತೋಷ್, ಜಿಲ್ಲಾನಿಮಿಯ, ತಾಜೊದ್ದಿನ್, ದಶರಥ, ಹಬೀಬ್, ಹಫೀಜ್ ಪಾಷಾಮಿಯ, ಕಂಟೆಪ್ಪಾ, ನಯುಂಷಾ, ವಿಠಲ್ ಶ್ರೀಕಾಂತ್, ಶಂಶೋದ್ದಿನ್, ಫಿರದೋಸ್ತ್, ಅಲ್ಲವೂದ್ದಿನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here