ಸುರಪುರ: ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂವಿಧಾನ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಡಾ: ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಅಲ್ಲದೆ ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಬಸವರಾಜ ಕೊಡೇಕಲ್ ಅವರು ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಗುರುಲಿಂಗಪ್ಪ ಖಾನಾಪುರ,ಪ್ರಧಾನಗುರು ಕಮಲಾಬಾಯಿ ಹಾಗು ಶಿಕ್ಷಕರಾದ ಮಹ್ಮದ್ ಯೂನಿಸ್ ಬೇಪಾರಿ,ರಾಮಣ್ಣ ಗುಂಜಾಳ,ಶಕುಂತಲಾ ಜಾಲವಾದಿ,ಅರುಣಮ್ಮ,ಶೈಲಜಾ ಗುಳಗಿ,ರಾಜಶೇಖರ,ಮಲ್ಕಣ್ಣ,ಮಸ್ತಾಕ್ ಅಹ್ಮದ್,ದೈಹಿಕ ಶಿಕ್ಷಕರಾದ ಮರೆಪ್ಪ ಸೇರಿದಂತೆ ಅನೇಕರಿದ್ದರು.