ಕಲಬುರಗಿ: ಆಫ್ಲೈನ್ ಮೂಲಕ ಪರೀಕ್ಷೆ ನಡೆಸುವದನ್ನು ಕೈ ಬಿಡುವಂತೆ ಆಗ್ರಹಿಸಿ ಕಲಬುರಗಿ ಸಂಯುಕ್ತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಕಾನೂನು ವಿದ್ಯಾರ್ಥಿಗಳು ನಗರದ ಸರದಾರ ವಲ್ಲಭಭಾಯಿಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರೆಸುವದಾಗಿ ಜಿಲ್ಲಾಡಳಿತದ ಮೂಲಕ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಮರ್ ಜುನೈದಿ, ವಿಶಾಲ್ ಪೂಜಾರಿ, ಸಚಿನ್ ಕೋಗನೂರ, ಅಂಬರೀಷ ಭಾವಿಕಟ್ಟಿ, ಶ್ರವಣ ಖಜನದಾರ್, ಮಶಾಕ್ ಜಮಗಾ, ಮೆಹಬೂಬ ಖಾನ್ ಸೇರಿದಂತೆ ಇತರರು ಇದ್ದರು.