ಸಮಂಜಲಾಪುರ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
18

ಸುರಪುರ:ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ ನಂ.೧೯ ಗೂಗಲಗಟ್ಟಿ, ಮಲಮುತ್ತೇರದೊಡ್ಡಿ ಹಾಗೂ ವಾರ್ಡ ನಂ.೨೧ ಮಂಜಲಾಪೂರ ವಾರ್ಡಗಳ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯರ್ತರರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು, ಮುಂದೆ ಎಲ್ಲರು ಒಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಹೇಳಿದರು.

Contact Your\'s Advertisement; 9902492681

ನಂತರ ಕಕ್ಕೇರಾ ವಾರ್ಡ ನಂ. ೨೧ರ ಮಂಜಲಾಪೂರದ ಭೀಮಣ್ಣ ಶಾಂತಪೂರ,ಪರಮಣ್ಣ ಬೈಲಾಪೂರ, ಹಣಮಂತ ಬಂಡಿಮನಿ, ಬಸಣ್ಣ ಪ್ಯಾಟಿ ಹಾಗೂ ವಾರ್ಡ ನಂ. ೧೯ ಗೂಗಲಗಟ್ಟಿ ಮತ್ತು ಮಲಮುತ್ತೇರದೊಡ್ಡಿಯ ಗಂಗಪ್ಪ ಅಂಬಿಗೇರ, ಮೌನೇಶ ಮರಾಠಿ, ಮೌನೇಶ ಗಡ್ಡಿ, ಹಣಮಂತ ಹಳ್ಳಿ, ಪರಮಣ್ಣ ಬೂತಾರ, ಅಂಬ್ರೇಶ ಬೂತಾರ, ಅಮರಪ್ಪ ಗಡ್ಡಿ, ಸಿದ್ದಪ್ಪ ಮಲಮುತ್ತಿ, ನಾಗಪ್ಪ ಮಲಮುತ್ತಿ, ಪರಮಣ್ಣ ಗಡ್ಡಿ, ನಾಗಪ್ಪ ಮಲಮುತ್ತಿ, ಗದ್ಯಪ್ಪ ಬಂಟನೂರ, ಬಸವರಾಜ ಗೋವಿಂದರ, ಪರಮಣ್ಣ ಮಲಮುತ್ತಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್.ವಿ.ಯಾದವ,ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ ಕುಪ್ಪಿ ,ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ,ಮಲ್ಲಣ್ಣ ಸಾಹು ನರಸಿಂಗಪೇಟ,ಯುವ ಮುಖಂಡರಾದ ರಾಜಾ ವೇಣುಗೊಪಾಲ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ಮಾನಯ್ಯ ಸಾಹು ಬಂಡೋಳ್ಳಿ, ಗುಂಡಪ್ಪ ಸೋಲ್ಲಾಪೂರ, ಬಸಯ್ಯ ಸ್ವಾಮಿ, ಪರಮಣ್ಣ ತೇರಿನ, ಮಂಜುನಾಥ ಉದ್ದಾರ ಆಲ್ದಾಳ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here