ಪೇಠ ಅಮ್ಮಾಪುರ ಗ್ರಾಮ ಮಟ್ಟದ ವಾಲಿಬಾಲ್ ಟೂರ್ನಾಮೆಂಟ್

0
7

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಗ್ರಾಮ ಮಟ್ಟದ ವಾಲಿಬಾಲ್ ಟೂರ್ನಾಮೆಂಟ್ ಹಮ್ಮಿಕೊಳ್ಳಲಾಗಿತ್ತು.

ದಿ:ವೆಂಕಣ್ಣ ಬಿ ಯಾದವ್ ಮತ್ತು ಬಸವಲಿಂಗಪ್ಪ ಕಂಗಳ ಇವರ ಸ್ಮರ್ಣಾರ್ಥವಾಗಿ ಪಂದ್ಯಾವಳಿ ಆಯೋಜಿಸಲಾಗಿತ್ತು.ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ೧೧೧೧೧ ರೂಪಾಯಿ ಮತ್ತು ಕಪ್,ದ್ವಿತಿಯ ಬಹುಮಾನ ೫೫೫೫ ಮತ್ತು ಕಪ್ ಹಾಗು ತೃತಿಯ ಬಹುಮಾನ ೩೩೩೩ ಮತ್ತು ಕಪ್ ಬಹುಮಾನ ಇರಿಸಲಾಗಿತ್ತು.

Contact Your\'s Advertisement; 9902492681

ಸ್ಥಳಿಯ ಪೇಠ ಅಮ್ಮಾಪುರ ಯುವಕರಿಂದ ೧೦ ತಂಡಗಳನ್ನು ಮಾಡಿ ಬೆಳಿಗ್ಗೆಯಿಂದ ಪಂದ್ಯಾವಳಿ ಆರಂಭಿಸಲಾಗಿತ್ತು.ಸಂಜೇಯವರೆಗೂ ನಡೆದ ಪಂದ್ಯಾವಳಿಯಲ್ಲಿ ಕೊನೆಯದಾಗಿ ಮಾರುತೇಶ್ವರ ವಾಲಿಬಾಲ್ ತಂಡ ಮತ್ತು ಅಪ್ಪು ವಾಲಿಬಾಲ್ ತಂಡ ಫೈನಲ್ ತಲುಪಿ ಅಂತಿಮವಾಗಿ ಮಾರುತೇಶ್ವರ ತಂಡ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿತು.ಅಪ್ಪು ತಂಡ ದ್ವಿತಿಯ ಬಹುಮಾನ ಮತ್ತು ಬಸವೇಶ್ವರ ವಾಲಿಬಾಲ್ ತಂಡ ತೃತಿಯ ಬಹುಮಾನಕ್ಕೆ ತೃಪ್ತಿ ಪಟ್ಟಕೊಂಡವು.

ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹೇಶ ವ್ಹಿ ಯಾದವ್ ಹಾಗು ಗ್ರಾಮ ಪಂಚಾಯತಿ ಅಧ್ಯಕ್ಷ ಶರಣಬಸವ ಕಂಗಳ ಅವರು ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here