ರಾಜುಗೌಡ ಜನುಮ ದಿನ:ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

0
3

ಸುರಪುರ: ಶಾಸಕರು ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ (ರಾಜುಗೌಡ) ಅವರ ೪೩ನೇ ಜನುಮ ದಿನದ ಅಂಗವಾಗಿ ನಗರದಲ್ಲಿ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸೋಮವಾರ ಬೆಳಿಗ್ಗೆ ನಗರದ ಮುಜುಮ್ದಾರಗಲ್ಲಿಯಲ್ಲಿನ ಐತಿಹಾಸಿಕ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.ದೇವರಿಗೆ ಅಭಿಷೇಕ ಮಹಾ ಮಂಗಳಾರತಿ ಹಾಗು ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ರಾಜುಗೌಡ ಕಟೌಟ್‌ಗೆ ಕ್ಷೀರಾಭಿಷೇಕ: ಪ್ರಸನ್ನ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕರ ಅಭಿಮಾನಿಗಳು ಕ್ಷೀರಾಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಹಾಗು ಶಾಸಕರ ಸಹೋದರ ಹಣಮಂತ ನಾಯಕ (ಬಬ್ಲುಗೌಡ) ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಶಾಸಕರಾದ ರಾಜುಗೌಡ ಅವರಿ ಇನ್ನೂ ಹೆಚ್ಚಿನ ಆರೋಗ್ಯ ಭಾಗ್ಯ ಲಭಿಸಲಿ,ಅವರಿಗೆ ಸಚಿವ ಸ್ಥಾನ ದೊರೆಯಲಿ ಮತ್ತು ಅವರ ಸಮಸ್ತ ಕುಟುಂಬವರ್ಗ ಸುಖ ಸಂತೋಷದಿಂದ ಇರಲೆಂದು ದೇವರಲ್ಲಿ ಪ್ರಾರ್ಥಿಸುವ ಜೊತೆಗೆ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

ಅನ್ನ ದಾಸೋಹ: ಶಾಸಕರ ಜನುಮ ದಿನದ ಅಂಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾರ್ವಜನುಜಕರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸೋಮವಾರ ಮದ್ಹ್ಯಾನದ ವೇಳೆಗೆ ಆರಂಭಗೊಂಡ ಅನ್ನದಾಸೋಹ ಸೇವೆಯನ್ನು ಸಾಯಂಕಾಲದ ವರೆಗು ನಡೆಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ರಾಜಾ ರಂಗಪ್ಪ ನಾಯಕ,ಶಂಕರ ನಾಯಕ,ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ,ಆರ್.ಕೆ ಜೈನ್,ಬಲಭೀಮ ನಾಯಕ ಬೈರಿಮಡ್ಡಿ,ಶರಣು ನಾಯಕ ಬೈರಿಮಡ್ಡಿ,ಈಶ್ವರ ನಾಯಕ,ಭೀಮಣ್ಣ ಬೇವಿನಾಳ,ರಮೇಶ ದರಬಾರಿ,ವಿಷ್ಣು ಗುತ್ತೇದಾರ,ಅಭಿಜಿತ್ ನಾಯಕ,ದತ್ತಾತ್ರೆಯ ಗುತ್ತೇದಾರ,ರಾಘವೇಂದ್ರ ಭಕ್ರಿ,ಭೀಮು ಗೋಗಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here