ವೀರ ಯೋಧ ಮಾನಯ್ಯ ಹೊಸ್ಮನಿಗೆ ಯುವ ಕರವೇ ಸನ್ಮಾನ

0
8

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಗಡಿ ಕಾಯುವ ವೀರ ಯೋಧ ಮಾನಯ್ಯ ಹೊಸ್ಮನಿಗೆ ನಗರದಲ್ಲಿ ಯುವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಗಿದೆ.ನಗರದ ಶ್ರೀಮತಿ ರಾಣಿ ಪಾಪಮ್ಮ ಜೇಜಾ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ವೀರ ಯೋಧನನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಇಂದು ಭಾರತದ ಎಲ್ಲರು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ದೇಶ ಕಾಯುವ ಯೋಧರು ಕಾರಣ ಅಂತಹ ಯೋಧರನ್ನು ನಾವು ನಿತ್ಯವು ಸ್ಮರಿಸಬೇಕು.ಆದ್ದರಿಂದ ಇಂದು ನಮ್ಮವರಾದ ದೇವರಗೋನಾಲ ಗ್ರಾಮದ ಯೋಧ ಮಾನಯ್ಯ ಹೊಸ್ಮನಿಯವರುನ್ನು ಯುವ ಕರ್ನಾಟಕ ರಕ್ಷಣಾ ವೇದಿಕೆ ಸನ್ಮಾನಿಸಿ ಗೌರವಿಸುವ ಮೂಲಕ ಯೋಧರಿಗೆ ಬೆಂಬಲ ತೋರುತ್ತಿದ್ದೇವೆ ಎಂದರು.

Contact Your\'s Advertisement; 9902492681

ಸನ್ಮಾನ ಸ್ವೀಕರಿಸಿದ ಯೋಧ ಮಾನಯ್ಯ ಹೊಸ್ಮನಿ ಮಾತನಾಡಿ,ನಾವು ಗಡಿಯಲ್ಲಿದ್ದು ಹಗಲಿರಳು ಭಾರತ ಮಾತೆಯ ಸೇವೆ ಮಾಡುತ್ತೇವೆ,ಅದನ್ನು ಗುರುತಿಸಿ ತಾವು ಇಂದು ನನ್ನನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸಿರುವುದಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಅಲ್ಲದೆ ದೇಶದ ಎಲ್ಲರು ನಮ್ಮ ಅಣ್ಣ ತಮ್ಮಿಂದರಂತೆ ಅವರೆಲ್ಲರ ರಕ್ಷಣೆ ಮಾಡುವ ಸೇವೆ ಲಭಿಸಿರುವುದು ಸಂತೋಷದ ಸಂಗತಿ ಇದನ್ನು ನೆನೆದೆ ನಾವು ನಿತ್ಯವು ನಮ್ಮ ಸೇವೆಯಲ್ಲಿ ತೊಡಗುತ್ತೇವೆ,ಅದಕ್ಕೆ ನೀವು ತೋರುತ್ತಿರುವ ಈ ಗೌರವ ನಮ್ಮಲ್ಲಿ ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡಲು ಶಕ್ತಿ ತುಂಬುತ್ತದೆ,ಈ ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಮತ್ತಷ್ಟು ಇಂತಹ ಯೋಧರನ್ನು ಗುರುತಿಸಿ ಸನ್ಮಾನಿಸುವ ಮೂಲಕ ನಮ್ಮೆಲ್ಲ ಯೋಧರಿಗೆ ಬಲ ತುಂಬಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹುಲಿಹೈದರ ಸಂಸ್ಥಾನದ ರಾಜ ವಂಶಸ್ಥರಾದ ರಾಜಾ ಶುಭಾಶ್ಚಂದ್ರ ನಾಯಕ,ವೇದಿಕೆ ತಾಲೂಕು ಗೌರವಾಧ್ಯಕ್ಷರಾದ ರಾಜಾ ಚನ್ನಪ್ಪ ನಾಯಕ,ತಾಲೂಕು ಉಪಾಧ್ಯಕ್ಷ ಸಚಿನಕುಮಾರ ನಾಯಕ,ಖಜಾಂಚಿ ಮಂಜುನಾಥ,ಕಾರ್ಯದರ್ಶಿ ರಫೀಕ್ ಷಾ,ಅಬೀದ್ ಹುಸೇನ್ ಪಗಡಿ,ರಾಜಾ ಉಡಚಪ್ಪ ನಾಯಕ,ಅನೀಲ್ ಬಿಲ್ಹಾರ್,ಹರೀಶ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here