ಬಂಡಾಯ ಸಾಹಿತಿ ಚಂಪಾ ನಿಧನ: ಸಾಹಿತಿ, ಬರಹಗಾರರ ಸಂತಾಪ

0
49

ಬೆಂಗಳೂರು: ಬಂಡಾಯ ಸಾಹಿತಿ, ಕನ್ನಡ ಸಾಕ್ಷಿ ಪ್ರಜ್ಞೆಯ ಕವಿ ಮೊನಚು ಮಾತಿನ ಸೊಗಸುಗಾರ ಗೋಕಾಕ ಚಳವಳಿಯ ರೂವಾರಿ ಸಂಘಟಕರು ಕನ್ನಡ ಸಾರಸ್ವತ ಲೋಕದಲ್ಲಿ ಚಂಪಾ ಎಂದೇ ಖ್ಯಾತಿ ಪಡೆದಿರುವ ಪ್ರೊ ಚಂದ್ರಶೇಖರ ಪಾಟೀಲ (83) ಅವರು ಇನ್ನಿಲ್ಲ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದಾರೆ.
ಸಂತಾಪ: ಸಾಹಿತಿಗಳಾದ ಡಾ. ಬಸವರಾಜ ಸಬರದ, ಪ್ರೊ. ಎಚ್.ಟಿ. ಪೋತೆ, ವಿಶ್ವಾರಾಧ್ಯ ಸತ್ಯಂಪೇಟೆ, ಡಾ. ಶ್ರೀಶೈಲ ನಾಗರಾಳ, ಡಾ.‌ ಶಿವರಂಜನ್ ಸತ್ಯಂಪೇಟೆ, ಬಸವರಾಜ ಕೊನೇಕ್, ಶಿವಣ್ಣ ಇಜೇರಿ, ಸಿದ್ಧರಾಮ ಹೊನ್ಕಲ್ , ಪ್ರೊ. ಎಸ್.ಎಲ್. ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ವೀರಭದ್ರ ಸಿಂಪಿ, ಮಹಿಪಾಲರೆಡ್ಡಿ ಮುನ್ನೂರ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here