ಕಲಬುರಗಿ : ನಗರದ ಸಮತಾ ಕಾಲೋನಿ ದತ್ತ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಪ್ರ ಸಮಾಜದ ಹಿರಿಯರಾದ ಹಣಮಂತಾಚಾರ್ಯ ಸರಡಗಿ, ವಿಷ್ಣುದಾಸಾಚಾರ್ಯ ಖಜೂರಿ, ವಿನೋದಾಚಾರ್ಯ ಗಲಗಲಿ, ಪ್ರಸನ್ನಾಚಾರ್ಯ ಜೋಶಿ, ಗೋಪಾಲಾಚಾರ್ಯ ಅಕಮಂಚಿ ಮತ್ತು ಅಭಯಾಚಾರ್ಯ ಗುರುಗಳ ನೇತೃತ್ವದಲ್ಲಿ ಭಾಗವತ ಪುರಾಣ ಕಾರ್ಯಕ್ರಮ ಗುರುವಾರ ನಡೆಯಿತು.
ಪುರಾಣ ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಪ್ರವಚನ ಮೂಲಕ ಆಗಮಿಸಿದ ಭಕ್ತರನ್ನು ತಿಳಿಸಲಾಯಿತು.
ಸಮಾಜದ ಪ್ರಮುಖರಾದ ಮುಕುಂದಾಚಾರ್ಯ ಪುರಾಣಿಕ, ಬಂಡುರಾವ ರೋಲೆಕರ್, ವಿಠ್ಠಲರಾವ ಕುಲಕರ್ಣಿ, ಭೀಮಸೇನ ಕುಲಕರ್ಣಿ, ಕಿರಣ ಪಾಟೀಲ್, ದತ್ತಾತ್ರೇಯ ಕುಲಕರ್ಣಿ, ಲಕ್ಷ್ಮೀ ಯಳವಾರ, ಆಶಾ ದೇಶಪಾಂಡೆ, ಪ್ರಸನ್ನ ದೇಶಪಾಂಡೆ
ಇದ್ದರು.