ಕಲಬುರಗಿ: ಹೆಚ್,ಶಿವರಾಮೇಗೌಡರ ಕರವೇ ಸಂಘಟನೆಯ ವತಿಯಿಂದ ಇಂದು ಕಲಬುರಗಿ ನಗರದ ಸರಕಾರಿ ಪ್ರೌಢ ಶಾಲೆ, ಶಹಬಜಾರ ನಡೆದ ಸ್ವಾಮಿ ವಿವೇಕಾನಂದ ರವರ159ನೇ ಜನ್ಮದಿನದ ಕಾರ್ಯಮವನ್ನು ಜೆ,ಡಿ,ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಬೀರಬಿಟ್ಟಿ ರವರು ಉದ್ಘಾಟಿಸಿದರು,
ಯುವ ನಾಯಕತ್ವ ಕುರಿತು ಉಪನ್ಯಾಸ ನೀಡಿದ ಭಾರತ ಸೇವಾದಳದ ಜಿಲ್ಲಾ ಸಂಘಟಿಕರಾದ ಸೈಯದ್ ಖಮೋದ್ದಿನ್ ರವರ ಮಾತನಾಡಿ ಯುವಕರಿಗೆ ಸ್ವಾಮಿ ವಿವೇಕಾನಂದ ರವರ ಆದರ್ಶಗಳು ಮೂಲ ಕಾರಣ ಎಂದು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಹ ಶಿಕ್ಷಕರಾದ ಸೂರ್ಯಕಾಂತ ಡಿ, ಪಟ್ಟಶೇಡಿ ರವರ ವಹಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಮಂಜುನಾಥಶ,ನಾಲವಾರಕರ್ ರವರು ಮಾತನಾಡಿ ಸ್ವಾಮಿ ವಿವೇಕಾನಂದ ರವರ 159ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022 ,ಹಾಗೂ ಕೋವಿಡ್-19 ರೋಗದ 3ನೇ ಅಲೆಯ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ, ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಹಾಕುವ ಮೂಲಕ 3ನೇ ಅಲೆ ಬಗ್ಗೆ ಗಮನ ನೀಡಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕರವೇ ಸಾಂಸ್ಕೃತಿಕ ಘಟಕದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರು ಮಾಡಿದರು,