ಕಲಬುರಗಿ: ನಗರದ ಶ್ರೀಮತಿ ಕಸ್ತೂರಬಾಯಿ.ಪಿ.ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ:ಬಿ.ಪಿ.ಬುಳ್ಳಾ ಅವರು ಮಾತನಾಡುತ್ತಾ ೧೨ ನೇ ಶತಮಾನದ ಕಾಲವೆಂದರೆ ಸಾಮಾಜಿಕ ಸುಧಾರಣೆಯ ಸುವರ್ಣಯುಗ ಎಂದರೆ ತಪ್ಪಾಗಲಾರದು ವಿಶ್ವ ಗುರು ಬಸವೇಶ್ವರರ ನಾಯಕತ್ವದ ಸಮಕಾಲಿನ ಶರಣರಲ್ಲಿ ಅಂಬಿಗರ ಚೌಡಯ್ಯನವರ ಒಬ್ಬರು ತಮ್ಮದೆಯಾದ ಹೆಸರಿನ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿ ಕಾಯಕದೊಂದಿಗೆ ಜೀವನ ಸಾಗಿಸಿದ ಶ್ರೇಷ್ಠ ವಚನಕಾರರು ಅಂಬಿಗರ ಚೌಡಯ್ಯನವರ ತಮ್ಮ ನೇರ,ನೀಷ್ಠುರವಚನಗಳ ಮುಖಾಂತರ ಸಮಾಜದ ಮೂಡನಂಬಿಕೆ ಕಂದಾಚಾರ ಹಾಗೂ ಜಾತಿ ವ್ಯವಸ್ಥೆ ನಿರ್ಮೂಲನೆಗೆ ನಾಂದಿ ಹಾಡಿದರು.ಸಮಾಜದ ಕೀಳುರಿಮೆ ಆಚಾರ ವಿಚಾರ ಸರಿಪಡಿಸಿ ಜನರಲ್ಲಿ ವೈಚಾರಿಕತೆಯ ಮನೋಭಾವ ಬೆಳೆಸಿದ ಕೀರ್ತಿ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ರಾಜೇಂದ್ರ ಝಳಕಿ, ಉಪನ್ಯಾಸಕರಾದ ಧರ್ಮರಾಜ ಜವಳಿ, ಸಂಸ್ಥೆಯ ಕಾರ್ಯದರ್ಶಿ ಅನೀಲಕುಮಾರ ನಾಟೀಕಾರ ಪ್ರಾಚಾರ್ಯರಾದ ಸೋನಾಲಿ ಬೆಟಗೇರಿ ವೇದಿಕೆನೇಲೆ ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಸೈಬಣ್ಣಾ ವಡಗೇರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಆಸಿನರಾದ ಅತಿಥಿಗಳಿಗೆ ಕುಮಾರಿ ಆರತಿ ಸ್ವಾಗತ ಕೋರಿದರು. ನಿರೂಪಣೆ ಕುಮಾರಿ ಸಾವಿತ್ರಿ ನಡೆಸಿಕೊಟ್ಟರು, ಕುಮಾರ ಸಚಿನ್ ವಂದರ್ನಾಪಣೆ ಸಲ್ಲಿಸಿದರು. ಕಾಲೇಜೀನ ಸಿಬ್ಬಂದಿ ವರ್ಗದವರಾದ ಆರತಿ ವಡಗೇರಿ, ರೇಣುಕಾ ಕೊತಲಿ, ಮಾಳಮ್ಮಾ ಝಳಕಿ, ರಾಜೇಶ್ವರಿ, ಸುಜಾತ ಕುಲಕರ್ಣಿ, ಭಾಗ್ಯಶ್ರೀ ಪಾಟೀಲ, ಕುಮಾರಿ ಪ್ರಿಯಾಂಕಾ ಪೊದ್ದಾರ ಮತ್ತು ವೀರನಾಥ ಕೋಟಾರಿ ಹಾಜರಿದ್ದರು.