ಸುರಪುರ: ತಾಲೂಕಿನ ಲಕ್ಷ್ಮೀಪುರ ಬಿಜಾಸಪುರ ಮಧ್ಯದ ಶ್ರೀ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಅಬ್ಬೆತುಮಕೂರಿನ ಸಿದ್ಧಿಪುರಷ ವಿಶ್ವರಾಧ್ಯರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ವಿಶ್ವರಾಧ್ಯರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀಮಠದ ಪೂಜ್ಯರಾದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ,ಪ್ರತಿಯೊಬ್ಬರಿಗು ಧಾರ್ಮಿಕ ಸಂಸ್ಕಾರ ಮತ್ತು ಆಚಾರ,ಸಂಪ್ರದಾಯಗಳ ನಂಬಿಕೆ ಮುಖ್ಯವಾಗಿದೆ.ಅದರಂತೆ ಅಬ್ಬೆತುಮಕೂರಿನ ವಿಶ್ವರಾಧ್ಯರು ಈ ನಾಡು ಬೆಳಗಿದ ಪುಣ್ಯಪುರುಷರು ಹಾಗು ಸಿದ್ಧಿ ಪುರುಷರಾಗಿದ್ದಾರೆ.ಇಂದು ನಮ್ಮ ಶ್ರೀಮಠದಲ್ಲಿ ವಿಶ್ವರಾಧ್ಯರನ್ನು ನಿತ್ಯವು ನೆನೆಯುವ ಮೂಲಕ ಎಲ್ಲರು ಅವರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕಕ್ಕೇರಾ ಪುರಸಭೆ ಸದಸ್ಯರಾದ ಮಲ್ಲು ದಂಡಿನ್ ಮಾತನಾಡಿ,ಈ ಭಾಗದ ಭಕ್ತಾದಿಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿರುವ ಶ್ರೀಗಿರಿ ಮಠದ ಪೂಜ್ಯರ ಸೇವೆ ಅನನ್ಯವಾಗಿದೆ.ಅದರಂತೆ ಇಂದು ನಾವೆಲ್ಲರು ವಿಶ್ವರಾಧ್ಯರ ಪುರಾಣವನ್ನು ಕೇಳುವ ಮೂಲಕ ಅವರ ಕೃಪೆಯನ್ನು ಸಂಪಾದಿಸೋಣ ಹಾಗು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಸಮಾಜಮುಖಿಯಾದ ಕಾರ್ಯಗಳಿಗೆ ನಾವೆಲ್ಲರು ತನು ಮನ ಧನದಿಂದ ಸೇವೆಗೈದು ಮರಡಿ ಮಲ್ಲಿಕಾರ್ಜುನ ದೇವರ ಹಾಗು ಮೂಕಪ್ಪಜ್ಜರ ಮತ್ತು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆಯೋಣ ಎಂದರು.
ನಂತರ ಬಸ್ಸಯ್ಯ ಶಾಸ್ತ್ರಿಗಳು ಶಹಾಪುರ ಅವರಿಂದ ವಿಶ್ವರಾಧ್ಯರ ಪುರಾಣ ಮತ್ತು ಪ್ರವಚನ ಮತ್ತು ವಿಶ್ವರಾಧ್ಯರ ತೊಟ್ಟಿಲೋತ್ಸವ ಜರುಗಿತು ಹಾಗು ಕಲಾವಿದರಿಂದ ಸಂಗೀತ ಸೇವೆ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಶರಣಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಕೇರಿ,ಸರ್ವಜ್ಞ ಸೇವಾ ಸಂಸ್ಥೆಯ ಅಧ್ಯಕ್ಷ ಅಮರೇಶ ಕುಂಬಾರ,ವೀರಶೈವ ಲಿಂಗಾಯತ ಯುವ ವೇದಿಕೆ ತಾಲೂಕು ಅಧ್ಯಕ್ಷ ವಿರೇಶ ಪಂಚಾಂಗಮಠ ಮುಖಂಡ ಚನ್ನಬಸವ ವಾಲಿ ಸೇರಿದಂತೆ ಅನೇಕರಿದ್ದರು.