ಕಲಬುರಗಿ: ಕನ್ನಡ,ನಾಡು,ನುಡಿಗಾಗಿ ಸತತವಾಗಿ ಹೋರಾಟ ಮಾಡುತ್ತಿರುವ ಹೆಚ್,ಶಿವರಾಮೇಗೌಡರ ರವರ 57ನೇ ಜನ್ಮದಿನದ ಪ್ರಯುಕ್ತವಾಗಿ ಕರವೇ ಕಲಬುರಗಿ ಜಿಲ್ಲಾ ಘಟಕವು ನಗರದ ಸಿ,ಟಿ ಬಸ್ ನಿಲ್ದಾಣದಲ್ಲಿ ಇಂದು ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಿತು.
ಹಳ್ಳಿ,ಹಳ್ಳಿಗಳಿಂದ ಬರುವ ಪ್ರಯಾಣಿಕರಿಗೆ ಹೆಚ್,ಶಿವರಾಮೇಗೌಡರ ಜನ್ಮದಿನದ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕಲಬುರಗಿ ವಿಮಾನ ಸಲಹಾ ಸಮಿತಿಯ ನೂತನ ಸದಸ್ಯರಾದ ಶ್ರೀ ನರಸಿಂಹ ಮೆಂಡನ್ ರವರು ಚಾಲನೆ ನೀಡಿ ಜನರಿಗೆ ಉಪಹಾರ ವಿತರಣೆ ಮಾಡಿ, ರಾಜ್ಯದಲ್ಲಿ ಕನ್ನಡಿಗರ ರಕ್ಷಣೆಗಾಗಿ ಹೆಚ್,ಶಿವರಾಮೇಗೌಡರು ಹೋರಾಟ ಮಾಡುತ್ತಿರುವ ಒಬ್ಬ ಹೋರಾಟಗಾರ ಅವರ ಜನ್ಮದಿನದಂದು ಜನರಿಗೆ ಅನ್ನ ಸಂತರ್ಪಣೆ ಮಾಡುವ ಕಾರ್ಯಕ್ಕೆ ಅಭಿನಂದನೆಗಳು, ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ, ಬೀದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷರಾದ ಜಗನಾಥ ಸೂರ್ಯವಂಶಿ,ಕಲ್ಯಾಣ ಕರ್ನಾಟಕ ಗೋ ಶಾಲೆಯ ಅಧ್ಯಕ್ಷರಾದ ಸಾಧೀಕ ಅಲಿ ದೇಶಮುಖ,ಕರವೇ ರಾಜ್ಯ ಸಂಚಾಲಕರು ಮತ್ತು ಕಲಬುರಗಿ ಜಿಲ್ಲಾಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್, ಸಾಂಸ್ಕೃತಿಕ ಘಟಕದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರು,ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಲ್ಹಾದ ಹಡಗಿಲಕರ್, ನಗರಧ್ಯಕ್ಷರಾದ ಚರಣರಾಜ ರಾಠೋಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈರಾಜ ಕೀಣಗಿಕರ್, ಇನ್ನಿತರು ಭಾಗವಹಿಸಿದ್ದರು,