ಕಲಬುರಗಿ: ತಾಲೂಕಿನ ನಂದಿಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರ ಗ್ರಾಮದ ೨ ಎಕರೆ ಸ್ಮಶಾನಭೂಮಿ ಮಂಜೂರಾತಿ ಆದೇಶವನ್ನು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಯಶ್ವವಂತ ವ್ಹಿ.ಗುರುಕರ, ನಂದಿಕೂರ ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರಿಗೆ ಹಸ್ತಾಂತರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ತಹಸಿಲ್ದಾರ ಪ್ರಕಾಶ ಕುದುರಿ, ಉಪಾಧ್ಯಕ್ಷ ಶಿವಪುತ್ರ ಮೂಲಿಪಾಟೀಲ, ಪಿಡಿಓ ರಾಮಚಂದ್ರ ಮಸರಕರ್, ಸದಸ್ಯರಾದ ಚಂದ್ರಕಾಂತ ಪೂಜಾರಿ, ಶ್ರೀಕಾಂತ ಉಳ್ಳಿ, ಶಾಂತಬಾಯಿ ಅಂಬಾರಾಯ, ಶಿವಲೀಲಾ ರಾಚಯ್ಯಸ್ವಾಮಿ, ಚಂದ್ರಕಲಾ ಸೂರ್ಯಕಾಂತ, ಶಶಿಕಲಾ, ಶರಣು, ವಿಜಯಕುಮಾರ ರಾಠೋಡ, ರಾಜುಬಾಯಿ ಚವ್ಹಾಣ, ಭೀಮಾಶಂಕರ ನಾಗನಹಳ್ಳಿ, ಶ್ರೀನಿವಾಸ ದೋಡ್ಡಮನಿ, ಕಾರ್ಯದರ್ಶೀ ಮಹಾನಂದಾ ಸಿಂಗೆ, ದಸ್ತಯ್ಯಾ ಗುತ್ತೇದಾರ, ಅಶೋಕ ಚವ್ಹಾಣ, ಲಕ್ಷ್ಮಣ ನಾಯಕೋಡಿ, ವಿರೇಶ ನಂದಿಕೂರ, ಪವನಕುಮಾರ ವಳಕೇರಿ, ದಿನೆಶ ದೋಡ್ಡಮನಿ, ಹಜರತ ಸಾಬ್, ಸಲಿಂ ಕೋಟನುರ, ಕುಪೇಂದ್ರ ನಾಗನಹಳ್ಳಿ, ಸೂರ್ಯಕಾಂತ ನಂದಿಕೂರ ಹಾಗೂ ಇತರರು ಇದ್ದರು.