ಕಲಬುರಗಿ: ಇದೇ ಮಂಗಳವಾರ ನಡೆಯಲಿರುವ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಿನೋದ ಕುಮಾರ ಜನೇವರಿ ಸ್ಪರ್ಧಿಸಿದ್ದಾರೆ.
ವೃತ್ತಿಪರ ಶಿಕ್ಷಣ ಹಾಗೂ ಕಾನೂನು ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಯುವ ನ್ಯಾಯವಾದಿಗಳಿಗೆ ಸಮಸ್ಯೆ ಹಾಗೂ ವಕೀಲರ ಭದ್ರತೆಯ ಕುರಿತು ಕೆಲಸ ನಡೆಯಬೇಕೆಂಬ ಭರವಸೆ ನಮ್ಮದಾಗಿದೆ ಎಂದರು.
ಈ ಭಾಗದ ವಕೀಲರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಭರವಸೆ ನೀಡುವ ಮೂಲಕ ಮತಬಾಂಧವರಲ್ಲಿ ತಮ್ಮ ಪರ ಮತಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.