ವಾಹನದ ಚಕ್ರದಲ್ಲಿ ಸಿಲುಕಿ ಎರಡು ಕಾಲುಗಳು ಕಳೆದುಕೊಂಡ ಯುವಕ

0
96

ಶಹಾಬಾದ:ನಗರದ ವಾಡಿ ವೃತ್ತದ ಬಳಿಯ ಜಿಇ ಕಾರ್ಖಾಣೆಯ ಅತಿಥಿ ಗೃಹದ ಮುಂಭಾಗದಲ್ಲಿ ಟಾಟಾ ವಾಹನದ ಚಕ್ರದಲ್ಲಿ ಬೈಕ್ ಸವಾರ ಆಯಾ ತಪ್ಪಿ ಸಿಲುಕಿ ಎರಡು ಕಾಲುಗಳನ್ನು ಕಳೆದಗೊಂಡ ಘಟನೆ ಶನಿವಾರ ಮಧ್ಯಾನ ನಡೆದಿದೆ.

ಇದನ್ನೂ ಓದಿ: ಸ್ಥಳದಲ್ಲಿಯೇ 19 ಮಾಶಾಸನಗಳನ್ನು ಮಂಜೂರು ಮಾಡಿದ ತಹಸೀಲ್ದಾರ

Contact Your\'s Advertisement; 9902492681

ಎರಡು ಕಾಲುಗಳನ್ನು ಕಳೆದಕೊಂಡ ದೈರ್ದೈವಿ ನಿಖಿಲ್ ದಿನೇಶ ರಾಠೋಡ (35). ಮೂಲತಃ ಸಣ್ಣೂರ್ ಗ್ರಾಮದವನಾದ ನಿಖಿಲ್ ಯಾವುದೋ ಕೆಲಸಕ್ಕೆಂದು ಶಹಾಬಾದಗೆ ಬಂದಿದ್ದು. ನಗರದಿಂದ ಸಣ್ಣೂರಿಗೆ ಹೋಗುವ ಸಂದರ್ಭದಲ್ಲಿ ವಾಡಿ ವೃತ್ತದ ಬಳಿಯ ಜಿಇ ಕಾರ್ಖಾಣೆಯ ಅತಿಥಿ ಗೃಹದ ಮುಂಭಾಗದಲ್ಲಿ ಟಾಟಾ ವಾಹನಕ್ಕೆ ಸೈಡ್ ಹೊಡೆದು ಮುಂದಕ್ಕೆ ಹೋಗುವ ಅವಸರದಲ್ಲಿ ಡಿವೈಡರಗೆ ಹಾಕಿದ ಭೋರ್ಡ ಬೈಕ್‍ನ ಹ್ಯಾಂಡಲ್‍ಗೆ ತಾಗಿದೆ.ಇದರಿಂದ ವಾಹನದ ಚಕ್ರದಲ್ಲಿ ಬೈಕ್ ಸವಾರ ಆಯಾ ತಪ್ಪಿ ಸಿಲುಕಿದ್ದಾನೆ.

ಇದನ್ನೂ ಓದಿ: ಪುರಾಣ-ಪ್ರವಚನಗಳು ಆಲಿಸುವುದರಿಂದ ಬದುಕಿಗೆ ನೆಮ್ಮದಿ: ಶಾಸಕ ಮತ್ತಿಮಡು

ವಾಹನ ಎರಡು ಕಾಲುಗಳ ಮೇಲಿಂದ ಹೋದ ಪರಿಣಾಮ ಒಂದು ಕಾಲು ಮೊಣಕಾಲಿನವರೆಗೆ ಸಂಪರ್ಣ ತುಂಡಾಗಿದೆ.ಇನ್ನೊಂಡು ಕಾಲು ಅಪ್ಪಾಚಿಯಾಗಿದೆ. ಎರಡು ಕಾಲುಗಳನ್ನು ಕಳೆದುಕೊಂಡು ಒದ್ದಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು 108 ಅಂಬುಲೆನ್ಸ್‍ಗೆ ಕರೆ ಮಾಡಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಘಟನಾ ಸ್ಥಳಕ್ಕೆ ಪಿಐ ಸಂತೋಷ ಹಳ್ಳೂರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಅದ್ದೂರಿಯಿಂದ ಜರುಗಿದ ಶಹಾಬಾದ ಶರಣಬಸವೇಶ್ವರ ರಥೋತ್ಸವ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here