ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಹಾಗೂ ಸ್ಲಂ ಬಡಾವಣೆಯ ಕ್ರೀಡಾಪಟುಗಳಿಗೆ ಮಂಜೂರು ಮಾಡಲಾದ ಕ್ರೀಡಾ ಸಾಮಾಗ್ರಿಗಳ ವಿತರಣೆಯಲ್ಲಿ ಆಗುತ್ತೀರುವ ವಿಳಂಭ ದೋರಣೆಯನ್ನು ಖಂಡಿಸಿ ಜೈಕನ್ನಡಿಗರ ಸೇನೆ ನೆತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಯಿತು.
ಸೇನೆ ಸಂಸ್ಥಾಪಕ ದತ್ತು ಎಚ್.ಭಾಸಗಿ, ರಾಮಾ ಪೂಜಾರಿ, ಚೇತನ ಸಾಂಪ್ಲೆಕರ್, ವಿಠಲ, ಸಂಜೀವಕುಮಾರ ಮಾಳಗೆ, ಕವಿರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.