ಕಲಬುರಗಿ: ತಾಲೂಕಿನ ಫಿರೋಜಾಬಾದ್ ಗ್ರಾಮದ ಆರಾಧ್ಯ ದೈವ ಶ್ರೀ ಅನ್ನದಾನೇಶ್ವರ ವಿರಕ್ತ ಮಠದಲ್ಲಿ ಅನ್ನದಾನೇಶ್ವರ ಮಹಾರಥೋತ್ಸವ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ನೆರವೇರಿತು.
ರಥೋತ್ಸವಕ್ಕೂ ಮುನ್ನ ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವಲಿಂಗ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಅನ್ನದಾನೇಶ್ವರರ ಪಲ್ಲಕ್ಕಿ ಮಹೋತ್ಸವ, ಗಂಗೆ ಸ್ನಾನ, ಸುಮಂಗಲೆಯರ ಕುಂಭ, ಕಳಸ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ಪುರವಂತಿಕೆ ಕಲೆ ಅಲ್ಲಿ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಥವನ್ನಾಗಿಸಿತು. ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜೇರಟಗಿಯ ವಿರಕ್ತಮಠದ ಪೂಜ್ಯ ಶಿವಾನಂದ ಸ್ವಾಮೀಜಿ, ಚವದಾಪುರಿ ಹಿರೇಮಠದ ಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು, ಅವರಾದ (ಬಿ) ಶ್ರೀಗಳು ಸಮ್ಮುಖವಹಿಸಿದ್ದರು. ರಥೋತ್ಸವದಲ್ಲಿ ಪ್ರಮುಖರಾದ ಶಿವಶರಣಪ್ಪ ಹೂಗಾರ, ಕಲ್ಲಪ್ಪ ಪ್ಯಾಟಿ, ಮಲ್ಲಿಕಾರ್ಜುನ ಧೂಳಬಾ, ಸಿದ್ದಣ್ಣ ಕೋಬಾಳ, ತಿಪ್ಪಣ್ಣ ರಡ್ಡಿ, ಸಿದ್ದಲಿಂಗ ನಾಶಿ, ಶರಣಬಸಪ್ಪ ಹಡಪದ, ನಾಗಣ್ಣ ನೇಲೋಗಿ, ಮಹಾದೇವಪ್ಪ ಪೂಜಾರಿ, ಕರೆಪ್ಪ ಪೂಜಾರಿ, ಬಾಬು ಪವಾಡಿ, ಮಲ್ಲಿಕಾರ್ಜುನ ಬಡಿಗೇರ್, ವಿಶ್ವರಾಜ ಹಿರೇಮಠ, ಸಿದ್ದು ಕೋಬಾಳ, ರಾಜಶೇಖರ ಕೋಬಾಳ, ಶಿವಪುತ್ರ ಮಾಮನಿ, ಮಹೇಶ ಹೂಗಾರ ಸೇರಿದಂತೆ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.