2 ವರ್ಷದ ಬಾಲಕ ಮುಜಮ್ಮಿಲ್ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

0
71

ಕಲಬುರಗಿ: ಡಿಸೆಂಬರ್ 7 ರಂದು ನಗರದ ಫಿರದೋಸ್ ಕಾಲೋನಿಯಲ್ಲಿ ಮರಳಿನಲ್ಲಿ ಎರಡು ವರ್ಷದ ಬಾಲಕ ಮೊಹಮ್ಮದ್ ಮುಜಮ್ಮಿಲ್ ಶವ ಪತ್ತೆಯಾಗಿತು. ಈ ಪ್ರಕರಣ ನಡೆದು 6 ತಿಂಗಳು ಕಳೆದರು ಇದುವರೆಗೆ ಪೊಲೀಸರು ಆರೋಪಿಗಳನ್ನು  ಬಂಧಿಸಲು ಸಾಧ್ಯವಾಗದಿರುವುದನ್ನು ಖಂಡಿಸಿ ಪ್ರಕರಣ ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ನಿರ್ದಷ್ಠವಾಧಿ ಧರಣಿ ನಡೆಸಿದರು.

ಬುಧವಾರ ನಗರದ ಜಗತ್ ವೃತದಲ್ಲಿ ಜೆಡಿಎಸ್ ಯುವ ಕಾರ್ಯಕರ್ತರು ಸೇರಿದಂತೆ ಹಲವು ಸಮಾಜಿಕ ಕಾರ್ಯಕರ್ತರ ಧರಣಿ ಸತ್ಯಗ್ರಹ ನಡೆಸಿ, ಪೊಲೀಸರು ಅಪರಾಧವನ್ನು ನಿರ್ಲಕ್ಷ್ಯ ವ್ಯಕ್ತ ಪಡಿಸುತ್ತಿದ್ದಾರೆ. ಕೂಡಲೇ ಪ್ರಕರಣವನ್ನು ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್, ಎಡಿಜಜಿಪಿ ಅಲೋಕ ಕುಮಾರ ಅವರಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಧರಣಿ ಸತ್ಯಗ್ರಹ ನಡೆಸಿದರು.

Contact Your\'s Advertisement; 9902492681

ಮೃತ ಬಾಲಕ ಮುಜಮ್ಮಿಲ್ ಸಾವಿಗೆ ಬ್ಲಾಕ್ ಮ್ಯಾಜೀಕ್ ಕಾರಣವಾಗಿರುವ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಸೂಕ್ತ ತನಿಖೆ ನಡಿಸಿ ಮಗುವಿನ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾ ನಿರತ ಹೋರಾಟಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜಿಕ ಹೋರಾಟಗಾರರಾದ ರೀಯಾಜ್ ಖತೀಬ್, ಶಿರಾಜ್ ಶಾಬಾದಿ, ಅಜಹರ್ ಹುಸೇನ್, ಜಾವಿದ್ ಸೇರಿದಂತೆ ಪೊಷಕರು ಸೇರಿದಂತೆ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here