ಶ್ರೀ ವಿನಯ ಗುರೂಜಿಗೆ ರಾಜಕೀಯ ಮುಖಂಡರ ಭೇಟಿ

0
17

ಕಲಬುರಗಿ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಿಂದ ಹಳ್ಳಿಗಳಲ್ಲಿ ಇನ್ನು ಭಾರತೀಯಯತೆ ಉಳಿದಿದೆಯಲ್ಲದೆ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹಳ್ಳಿಗಳಿಂದ ಮಾತ್ರ ಸಾಧ್ಯ ಎಂದು ಅವಧೂತ ಸದ್ಗುರು ಶ್ರೀವಿನಯ್‌ಗುರೂಜಿ ತಿಳಿಸಿದರು.

ಅವರು ಇಂದು ಕಲಬುರಗಿಯಲ್ಲಿ ಭೇಟಿಯಾದ ರಾಜಕೀಯ ನಾಯಕರಿಗೆ ಆಶೀರ್ವಚನ ರೂಪದಲ್ಲಿ ಈ ಮಾತುಗಳನ್ನಾಡಿದರು. ಅವರು ತಮ್ಮ ಆಶ್ರಮದಿಂದ ಮುಂದಿನ ದಿನಗಳಲ್ಲಿ ವಿದ್ಯೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದಾಗಿ ಅವಧೂತ ಶ್ರೀ ವಿನಯ ಗುರೂಜಿ ತಿಳಿಸಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಸರ್ಕಾರದ ವಜಾಕ್ಕೆ ಬಿಎಸ್‌ಪಿ ಆಗ್ರಹ

ಅವಧೂತ ಶ್ರೀ ವಿನಯ ಗೂರುಜಿ ಯವರು ನುಡಿಯುವ ರಾಜಕೀಯ ಭವಿಷ್ಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ರಾಜಕೀಯ ಪಕ್ಷದ ನಾಯಕರು ಭೇಟಿಯಾದರು. ಈ ಸಂದರ್ಭದಲ್ಲಿ ಬಿಜೆಪಿಯ ಎಸ್ ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ಈ ಪ್ರಭಾವಿ ದಲಿತ ಸಮುದಾಯದ ಮುಖಂಡರಾದ ಡಾ.ಅಂಬಾರಾಯ ಅಷ್ಠಗಿ ಪೂಜ್ಯರಿಂದ ಆಶೀರ್ವಾದ ಪಡೆದಕೋಂಡರು.

ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ಯುವ ಮೋರ್ಚಾಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಗ್ರಾಮೀಣ ಯುವ ಮೋರ್ಚಾದ ಅಧ್ಯಕ್ಷ ಶರಣಗೌಡ ಹರಕಂಚಿ, ಬಿಜೆಪಿಯ ಮುಖಂಡರಾದ ವಿರೇಶ್ ಬಿರಾದಾರ, ಸಂತೋಷ ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಊಟ ಬೇಡಿದ ತಪ್ಪಿಗೆ ಮಗಳ ಬೆರಳಿಗೆ ಬರೆಯಿಟ್ಟಳು ಮಲತಾಯಿ!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here