ಜಮಗಾ(ಜೆ)- ಮಾದನ ಹಿಪ್ಪರ್ಗಾರಸ್ತೆಗೆ ೨.೭೫ ಕೋಟಿ: ಶಾಸಕ ಸುಭಾಷಆರ್‌ಗುತ್ತೇದಾರ

0
10

ಆಳಂದ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಾಲೂಕಿನಲ್ಲಿ ನಿರಂತರಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆಎಂದು ಶಾಸಕ ಸುಭಾಷ್‌ಆರ್‌ಗುತ್ತೇದಾರ ಹೇಳಿದರು.

ಶುಕ್ರವಾರ ಜಮಗಾ(ಜೆ) ಗ್ರಾಮದ ಹತ್ತಿರಲೋಕೊಪಯೋಗಿಇಲಾಖೆಯಅಪೇಂಡಿಕ್ಸ-ಇಅನುದಾನದಡಿ ಮಂಜೂರಾದ ರೂ.೨.೭೫ ಕೋಟಿ ವೆಚ್ಚದಜಮಗಾ(ಜೆ) ಕ್ರಾಸ್ ನಿಂದ ಮಾದನಹಿಪ್ಪರಗಾ ವರೆಗಿನರಸ್ತೆ ನಿರ್ಮಾಣಕಾಮಗಾರಿಗೆ ಶಾಸಕ ಸುಭಾಷ್‌ಆರ್‌ಗುತ್ತೇದಾರ ಚಾಲನೆ ನೀಡಿದರು.

Contact Your\'s Advertisement; 9902492681

ಆಳಂದ ಮತಕ್ಷೇತ್ರದಶಾಸಕನಾಗಿಚುನಾಯಿತನಾಗಿಅಧಿಕಾರ ಸ್ವೀಕರಿಸಿದ ದಿನದಿಂದಇಲ್ಲಿಯವರೆಗೆ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯಕಲ್ಪಿಸುವಲ್ಲಿ ನಿರೀಕ್ಷೆಗೂ ಮೀರಿಅನುದಾನತಂದಿದ್ದೇನೆಅದರ ಫಲವಾಗಿಯೇಇಂದು ಕಾಮಗಾರಿಗಳು ಪ್ರಗತಿಯಲ್ಲಿವೆ. ಜನತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸತತ ಪ್ರಯತ್ನಿಸುತ್ತಿದ್ದೇನೆಅಲ್ಲದೇಈ ಹಿಂದೆ ನೀಡಿದ ಭರವಸೆಯಂತೆ ನುಡಿದಂತೆ ನಡೆದಿದ್ದೇನೆಎಂದು ನುಡಿದರು.

ಈ ಸಂದರ್ಭದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷಆನಂದರಾವ ಪಾಟೀಲ ಕೊರಳ್ಳಿ, ಮುಖಂಡರಾದಚೆನ್ನವೀರ ಕಾಳಕಿಂಗೆ, ಅಶೋಕ ಗುತ್ತೇದಾರ, ಸಿದ್ದು ಹಿರೋಳಿ, ಕೆ ಬಿ ಮೂಲಗೆ, ಜಗದೇವಪ್ಪ ಪಾಟೀಲ, ರಮೇಶ ಪಾಟೀಲ, ಗುರು ಲಾವಣಿ, ದತ್ತಾ ಪಾಟೀಲ, ಸಿದ್ದಾರಾಮ ಶೇಳಕೆ ಸೇರಿದಂತೆಇತರರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here