ಕಲಬುರಗಿ: ನಗರದ ಬ್ರಹ್ಮಪುರ ವಡ್ಡರಗಲ್ಲಿಯಲ್ಲಿರುವ ಭಗತ್ ಸಿಂಗ್ ಚೌಕ್ನಲ್ಲಿ ಚಿತ್ರದುರ್ಗದ ಶ್ರೀ ಇಮ್ಮಡಿ ಜಗದ್ಗುರುಗಳಾದ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮಿಜಿ ಅವರ ೩೭ನೇ ವರ್ಷದ ಜನ್ಮೋತ್ಸವವನ್ನು ಭೋವಿ ವಡ್ಡರ ಸಮಾಜದ ನಗರ ಅಧ್ಯಕ್ಷ ಭೀಮಾಶಂಕರ ಎಸ್. ಭಂಕೂರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಮಾಜಿ ಪಾಲಿಕೆ ಸದಸ್ಯ ಅನಿಲ ಜಾಧವ, ತಿಮ್ಮಣ್ಣ ಜಾಧವ, ರಾಜು ಶಿಂಧೆ, ನಾಮದೇವ ಚೌಧರಿ, ಅಣ್ಣಪ್ಪ ಸಾಲಕ್ಕೆ ಹಾಗೂ ಸಮಾಜ ಮುಖಂಡರು ಇದ್ದರು.