ಆಗಸ್ಟ ೭ ಕ್ಕೆ ಅಪ್ಪಾರಾವ ಅಕ್ಕೋಣೆ ಅಭಿನಂದನ ಸಮಾರಂಭ

0
22

ಕಲಬುರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯಉಪಾಧ್ಯಕ್ಷರು, ಕನ್ನಡ ನಾಡು ಲೇಖಕರ ಮತ್ತುಓದುಗರ ಸಹಕಾರ ಸಂಘದ ಅಧ್ಯಕ್ಷರು ಆಗಿರುವ ಅಪ್ಪಾರಾವ ಅಕ್ಕೋಣಿಯವರಿಗೆ ೮೦ ವರ್ಷಗಳು ತುಂಬಿದ ಶುಭ ಸಂದರ್ಭದಲ್ಲಿ ಅವರ ಸ್ನೇಹ ಹಾಗೂ ಅಭಿಮಾನಿ ಬಳಗ “ಅವಿಶ್ರಾಂತ” ಅಭಿನಂದನ ಸಂಪುಟ ಲೋಕಾರ್ಪಣೆ ಮತ್ತು ದಾಂಪತ್ಯ ಜೀವನದ ಶಷ್ಟಬ್ದಿ ಸಮಾರಂಭವನ್ನು ೭- ೮ -೨೦೨೨ ರಂದುರವಿವಾರ ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ವಿರೇಂದ್ರ ಪಾಟೀಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ಡಾ.ಬಸವಲಿಂಗ ಪಟ್ಟದೇವರು, ಶ್ರೀಶೈಲ ಸಾರಂಗ ಮಠದ ಪೂಜ್ಯಶ್ರೀ ಜಗದ್ಗುರುಡಾ. ಸಾರಂಗದರ ದೇಶಿ ಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಹಿರಿಯ ಸಾಹಿತಿಗಳು, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪಅವರು” ಅವಿಶ್ರಾಂತ” ಸಂಪುಟ ಲೋಕಾರ್ಪಣೆಗೊಳಿಸುತ್ತಿದ್ದು, ಅಪ್ಪಾರಾವಅಕ್ಕೋಣೆಯವರು ರಚಿಸಿರುವ” ಹುತಾತ್ಮಧನಶೆಟ್ಟಿ ಮಲ್ಲಪ್ಪ” ಕೃತಿಯನ್ನುಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಡಾ.ದಯಾನಂದಅಗಸರ ಬಿಡುಗಡೆ ಮಾಡಲಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ.ಪಾಟೀಲ, ಭಾರತೀಯರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕರಾಜ್ಯ ಶಾಖೆಯಚೇರ್ಮನರಾದ ವಿಜಯಕುಮಾರ ಪಾಟೀಲ ಹಾಗೂ ಸಾರ್ವಜನಿಕಗ್ರಂಥಾಲಯಇಲಾಖೆಯ ನಿರ್ದೇಶಕರಾದಡಾ.ಸತೀಶಕುಮಾರ ಹೊಸಮನಿ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವಕುಲಕರ್ಣಿಅಭಿನಂದನ ನುಡಿಗಳನ್ನು ಆಡಲಿದ್ದಾರೆ.ಅಧ್ಯಕ್ಷತೆಯನ್ನು ಬಸವರಾಜ ಮತ್ತಿಮುಡ ವಹಿಸುತ್ತಿದ್ದು, ಅಭಿನಂದನ ಸಮಿತಿಯಅಧ್ಯಕ್ಷ, ನಿವೃತ್ತ ಪ್ರಾಚಾರ್ಯರಾದ ಪ್ರೊ. ಕೆ.ವಿಶ್ವನಾಥ ಹಾಗೂ ಕಾರ್ಯಧ್ಯಕ್ಷರಾದ ಶ್ರೀ ನಾಗಣ್ಣಗಣಜಲಖೇಡರವರು ಉಪಸ್ಥಿತರಿರುವರು.ಎಂದುಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here