ಹೋರಾಟಗಾರ ಗುರಣ್ಣ ಹಗರಟಗಿ ನಿಧನಕ್ಕೆ ಮುಖಂಡರ ಸಂತಾಪ

0
14

ಸುರಪುರ: ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಮುಖಂಡರಾಗಿ ಕಲಂ ೩೭೧ ಜೆ ಜಾರಿಗಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಮುಖಂಡ ಗುರಣ್ಣ ಮಡಿವಾಳ ಅಕಾಲಿಕವಾಗಿ ನಿಧನರಾಗಿದ್ದಾರೆ.ಅವರಿಗೆ ಪತ್ನಿ ಹಾಗೂ ನಾಲ್ಕು ಜನ ಮಕ್ಕಳಿದ್ದರು.

ಹೈ-ಕ ಹೋರಾಟ ಸಮಿತಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹೋರಾಟದಲ್ಲಿ ತೊಡಗಿದ್ದ ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಹೈ-ಕ ಹೋರಾಟ ಸಮಿತಿ ಮುಖಂಡರಾಗಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್,ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ್,ಮಂಜುನಾಥ ಗುಳಗಿ,ಅನಿಲ ಖಂಡಾರೆ,ಶರೀಫ ಸಂತ್ರಾಸ,ಅನವರಖಾನ್,ಕೃಷ್ಣಾ ಕಲಾಲ,ಇಕ್ಬಾಲ್ ಪಡಖನ್,ಗುರುಪಾದಪ್ಪ ಮಡಿವಾಳ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ಅನೇಕ ಮುಖಂಡರು ಗುರಣ್ಣ ಹಗರಟಗಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here