ಕವಡಿಮಟ್ಟಿ:ವಿದ್ಯುತ್ ತಂತಿ ಹರಿದು ಬಿದ್ದು ಒಂಬತ್ತು ಕುರಿಗಳ ಸಾವು

0
8

ಸುರಪುರ:ವಿದ್ಯುತ್ ತಂತಿ ಹರಿದುಬಿದ್ದ ಪರಿಣಾಮವಾಗಿ 9 ಕುರಿಗಳು ಸಾವನಪ್ಪಿರುವ ಧಾರುಣ ಘಟನೆಯೊಂದು ಕವಡಿಮಟ್ಟಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕವಡಿಮಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿಯಲ್ಲಿನ ಭತ್ತದ ಗದ್ದೆಯಲ್ಲಿ ಕುರಿಗಾಹಿ ಅಯ್ಯಾಳಪ್ಪ ಕೆಂಗೂರಿ ಎನ್ನುವವರು ತಮ್ಮ ಅನೇಕ ಕುರಿಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಿದ್ದರು ಎನ್ನಲಾಗಿದೆ,ಭತ್ತದ ಗದ್ದೆಯಲ್ಲಿ ಕುರಿಗಳು ಮೇಯುತ್ತಿರುವಾಗ ಪಂಪಸೆಟ್ ಮೋಟರ್‍ಗಳಿಗಾಗಿ ಹಾಕಲಾಗಿದ್ದ ವಿದ್ಯುತ ತಂತಿ ಹರಿದು ಬಿದ್ದಿದೆ ಎನ್ನಲಾಗುತ್ತಿದೆ.ಇದರಿಂದ ತಕ್ಷಣ ಮೇಯುತ್ತಿದ್ದ ಕುರಿಗಳ ಮೇಲೆ ತಂತಿ ಹರಿದು ಬಿದ್ದ ಪರಿಣಾಮವಾಗಿ ತಂತಿ 9 ಕುರಿಗಳಿಗೆ ತಗುಲಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿವೆ.

Contact Your\'s Advertisement; 9902492681

ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಹಾಗೂ ಪಶು ಸಂಗೋಪನಾ ಇಲಾಖೆ ತಾಲೂಕು ಅಧಿಕಾರಿ ಡಾ:ಸುರೇಶ ಅಚ್ಚಡ ಭೇಟಿಯನ್ನು ನೀಡಿದ್ದಾರೆ.ಕುರಿಗಳ ಸಾವಿಗೆ ವಿದ್ಯುತ್ ಅವಘಡ ಹೇಗೆ ಸಂಭವಿಸಿತು ಎನ್ನುವುದರ ಕುರಿತು ಪೊಲೀಸ್ ತನಿಖೆಯಿಂದ ನಿಖರ ಮಾಹಿತಿ ತಿಳಿದುಬರಲಿದೆ.ಕುರಿಗಳ ಸಾವಿನಿಂದ ಅಯ್ಯಾಳಪ್ಪ ತೀವ್ರ ನಷ್ಟಕ್ಕೊಳಗಾಗಿದ್ದು ಜೆಸ್ಕಾಂ ಇಲಾಖೆ ಅಥವಾ ಸರಕಾರ ಕುರಿಗಾಹಿ ಅಯ್ಯಾಳಪ್ಪಗೆ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here