ಕಲಬುರಗಿ : ಸುಮಾರು ಮೂವತ್ತೈದು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿಂಚಣಿದಾರರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿತಲುಪಬೇಕುಎಂದುಕರ್ನಾಟಕರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಅಧ್ಯಕ್ಷರಾದ ಡಾ.ಎಲ್.ಭೈರಪ್ಪ ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 4ಲಕ್ಷ 20 ಸಾವಿರ ಪಿಂಚಣಿದಾರರು ಹಾಗೂ 1 ಲಕ್ಷ 50 ಸಾವಿರಕುಟುಂಬ ಪಿಂಚಣೀದಾರರು ಸರ್ಕಾರದಿಂದ ನಿವೃತ್ತಿ ವೇತನ ಪಡೆಯುತ್ತಿದ್ದಾರೆ. ಸಾಲಷ್ಟು ಸರ್ಕಾರಿ ನೌಕರರಿಗೆ ದೀರ್ಘಕಾಲದಆರೋಗ್ಯ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ಸರ್ಕಾರದಿಂದ ಇದುವರೆಗೂ ನಗದುರಹಿತ ಯಾವುದೇ ಆರೋಗ್ಯ ಭಾಗ್ಯಯೋಜನೆ ಪಡೆದುಕೊಂಡಿಲ್ಲ. ಈ ಯೋಜನೆ ಶೀಘ್ರದಲ್ಲಿ ಅನುಷ್ಠಾನ ಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಯೋಜನೆಕುರಿತುಕರಡುಯೋಜನೆ ಸಿದ್ಧಪಡಿಸಿ ಅಭಿಪ್ರಾಯಕೋರಿಆರ್ಥಿಕ ಇಲಾಖೆ ಮತ್ತುಆರೋಗ್ಯಕುಟುಂಬ ಕಲ್ಯಾಣ ಇಲಾಖೆಗಳಿಗೆ ಕಡತಗಳನ್ನು ಕಳುಹಿಸಿ ಎರಡರಿಂದ ಮೂರು ತಿಂಗಳಾದರೂ ಇದುವರೆಗೂ ಈ ಇಲಾಖೆಗಳು ತಮ್ಮಅಭಿಪ್ರಾಯ ತಿಳಿಸಿಲ್ಲ. ಅಲ್ಲದೇ ಸರ್ಕಾರಿ ನಿವೃತ್ತ ನೌಕರರಿಗೆ ನಗದುರಹಿತಆರೋಗ್ಯಯೋಜನೆಕೂಡಲೇ ಜಾರಿಗೊಳಿಸಬೇಕು, 75-80 ವರ್ಷದ ನಿವೃತ್ತ ನೌಕರರಿಗೆ ಮೂಲ ಪಿಂಚಣಿಯಲ್ಲಿ ಶೇ.10 ರಿಂದ 15ಕ್ಕೆ ಹೆಚ್ಚಿಸಬೇಕು, ಕೂಡಲೇ ಸರ್ಕಾರ ಪಿಂಚಣಿ ಪರಿಷ್ಕರಣೆಗೆ 7ನೇ ವೇತನಆಯೋಗರಚಿಸಬೇಕು ಸೇದರಿಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕುಎಂದು ಆಗ್ರಹಪಡಿಸಿದರು.
ನಾಗಣ್ಣಗಣಜಲಖೇಡ, ಸೂರ್ಯಕಾಂತ, ಶಂಕರಗೌಡ ಬಿರಾದಾರ, ರಂಗೇಗೌಡ, ಎಸ್.ಎಂಆನಂದಪ್ಪ.ಎನ್.ನಂಜಪ್ಪ, ಸಿದ್ಧಣ್ಣ ಕೋಲಾರ ಸೇರಿದಂತೆಇತರರಿದ್ದರು.