ಸಮಾಜದ ಏಳ್ಗೆಗಾಗಿ ಸದಾಕಾಲ ಶ್ರಮಿಸಬೇಕು: ಭೀಮರಾವ ಸಾಳುಂಕೆ

0
142

ಶಹಾಬಾದ: ಭೋವಿ ಸಮಾಜದ ಮುಖಂಡರು ಸಮಾಜದ ಏಳ್ಗೆಗಾಗಿ ಸದಾಕಾಲ ಶ್ರಮಿಸಬೇಕು.ಆಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ ಎಂದು ಭೋವಿ ವಡ್ಡರ್ ಸಮಾಜ ಸೇವಾ ಸಂಘದ ನಗರಾಧ್ಯಕ್ಷಭೀಮರಾವ ಸಾಳೂಂಕೆ ಹೇಳಿದರು.

ಅವರು ಮಂಗಳವಾರ ನಗರದಲ್ಲಿ ಭೋವಿ ವಡ್ಡರ ಸಮಾಜ ಸೇವಾ ಸಂಘ ಶಹಾಬಾದ ತಾಲೂಕಾ ಘಟಕ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಭೋವಿ ವಡ್ಡರ ಸಮಾಜ ಸೇವಾ ಸಂಘದ ನಗರಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.ಅದರಂತೆ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ನೂತನ ಪದಾಧಿಕಾರಿಗಳು ಸಮಾಜದ ಜನರ ಧ್ವನಿಯಾಗಬೇಕು.ಸಮಾಜದ ಜನರ ಜತೆಗೆ ಉತ್ತಮ ಸಂಬಂಧದೊಂದಿಗೆ ವ್ಯವಹರಿಸಬೇಕು.ಅಲ್ಲದೇ ಇತರ ಸಮಾಜದ ಜತೆಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು.ಎಲ್ಲರ ಸಹಕಾರ ಪಡೆದು ಸಮಾಜದ ಉನ್ನತಿಗೋಸ್ಕರ್ ದುಡಿಯುವ ಸಂಕಲ್ಪ ಮಾಡೋಣ. ಯಾವುದೇ ಭಿನ್ನಾಭಿಪ್ರಾಯಗಳು ಹಾಗೂ ಮನಸ್ಥಾಪಗಳು ಇದ್ದರೂ ಅದನ್ನು ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳೋಣ.ಯಾವುದೇ ಕಾರಣಕ್ಕೂ ಸಮಾಜ ಚ್ಯುತಿ ಬಾರದಂತೆ ಸಮಾಜದ ಒಳತಿಗಾಗಿ ದುಡಿಯೋಣ ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಪದಾಧಿಕಾರಿಗಳಾದ ಪ್ರ.ಕಾರ್ಯದರ್ಶಿ ದೇವದಾಸ ಜಾಧವ,ಜಯಕುಮಾರ ಚೌಧರಿ, ಕನಕಪ್ಪ ದಂಡಗುಲಕರ, ಅನೀಲ ಬೋರಗಾಂವಕರ,ಸಿದ್ರಾಮ ಕುಸಾಳೆ,ದುರ್ಗಣ್ಣ ಕುಸಾಳೆ,ರಮೇಶ ಪವರ,ಅಂಬಣ್ಣ ಕುನ್ನೂರಕರ,ವೆಂಕಟೇಶ ಕುಸಾಳೆ, ರಾಮು ಕುಸಾಳೆ, ವಿಜಯ ದಂಡಗುಲಕರ ಬಸವರಾಜ ಮುದಗಲ,ವಿಜಯ ಕುಸಾಳೆ, ಅರ್ಜುನ ಮಾವನೂರ,ಚಂದ್ರಕಾಂತ ದೇವಕರ,ಮುಕಿಂದ ದಂಡಗುಲಕರ, ಬಸ್ಸು ದೇವಕರ,ಸುಭಾಷ ಕುಸಾಳೆ, ಶಂಕರ ಹಳ್ಳಿ,ಶ್ರೀನಿವಾಸ ದೇವಕರ,ರಾಜು ದಂಡಗುಲಕರ ಇತರರು ಉಪಸ್ಥಿತರಿದ್ದರು.

ಭೋವಿ ವಡ್ಡರ ಸಮಾಜ ಸೇವಾ ಸಂಘದ ನೂತನ ತಾಲೂಕಾ ಪದಾಧಿಕಾರಿಗಳು: ಅಧ್ಯಕ್ಷ: ಕಲ್ಲೋಳಿ.ಬಲಭೀಮ ಕುಸಾಳೆ ಪ್ರ.ಕಾರ್ಯದರ್ಶಿ: ರಮೇಶ .ನಾಗರಾಜ ಮೇಲಗಿರಿ, ತಿರುಮಲ.ಎಚ್. ದೇವಕರ. ಉಪಾಧ್ಯಕ್ಷ: ಶಂಕರ ದಂಡಗುಲಕರ,ವೆಂಕಟೇಶ ಕಟ್ಟಿಮನಿ,ರಾಜು ಖಣದಾಳ,ದತ್ತು ದಂಡಗುಲಕರ. ಸಂಘಟನಾ ಕಾರ್ಯದರ್ಶಿ: ಶರಣಕುಮಾರ ಭೀಮಶ್ಯಾ. ಸಹ ಕಾರ್ಯದರ್ಶಿ: ಅಮರನಾಥ ನಗನೂರ,ಸಿದ್ದು ಮರೆಪ್ಪ,ಅಶೋಕ ದೇವಕರ. ಕೋಶ್ಯಾಧ್ಯಕ್ಷ: ಅಣ್ಣಪ್ಪ ಗೋಟೆಕರ. ಕಾರ್ಯಕಾರಿಣಿ ಸದಸ್ಯರು: ಮಾರುತಿ ಪವರ,ಹಣಮಂತ ದಂಡಗುಲಕರ, ವಿರೇಶ ಪವರ,ಪರಶುರಾಮ ನಿಂಬಾಳಕರ,ಹಣಮಂತ ಭೀಮಶ್ಯಾ,ಭೀಮರಾಯ ಸಾಯಬಣ್ಣ,ಅಂಬ್ರೇಶ ದೇವಿಂದ್ರಪ್ಪ,ತಿರುಪತಿ ಲಕ್ಷ್ಮಯ್ಯ,ರಮೇಶ ದೇವದುರ್ಗ,ಶಿವು ದಂಡಗುಲಕರ, ಮಹೇಂದ್ರ ದಂಡಗುಲಕರ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here