ಕಲಬುರಗಿ: ಉತ್ತರಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿಇಲಾಖೆಯಿಂದ 25 ಕೋಟಿರೂ. ಮೊತ್ತದ ಕಾಮಗಾರಿಗಳ ನಿರ್ಮಾಣಕ್ಕೆಅನುಮೋದನೆ ಪಡೆದಿದ್ದು, ಕಾನೂನು ಬಾಹಿರವಾಗಿರಸ್ತೆಗೆ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಸೋಮವಾರ ಅಥವಾ ಮಂಗಳವಾರ ಲೋಕಾಯುಕ್ತರಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಲಿದ್ದೇನೆ ಎಂದು ಜೆಡಿಎಸ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕೃಷ್ಣಾ ರಡ್ಡಿ ತಿಳಿಸಿದರು.
ಅಪೆಂಡಿಕ್ಸ್-ಇ 5054 ಪ್ರಕಾರಜಿಲ್ಲಾ ಮತ್ತುಇತರೆ ರಸ್ತೆಗಳ ಸುಧಾರಣೆಗೆಅಪೆಂಡಿಕ್-ಇ 5054 ರಾಜ್ಯ ಹೆದ್ದಾರಿರಸ್ತೆ ಸುಧಾರಣೆಗೆ 18 ಕೋಟಿ, ಲೆಕ್ಕದಡಿ ಕಾಮಗಾರಿಗಳಿಗೆ 7 ಕೋಟಿರೂ.ನೀಡಲಾಗಿದೆ.ಇಲ್ಲಿ ಬಿಜೆಪಿ ಸರ್ಕಾರ ಪಸೆರ್ಂಟೇಜ್ ಸರ್ಕಾರಎಂಬುದು ಸಾಬೀತು ಮಾಡಿತೋರಿಸುವಂತಿದೆ.ಈ ಕ್ಷೇತ್ರ ವ್ಯಾಪ್ತಿಯಲ್ಲಿಯಾವುದೇ ಹಳ್ಳಿ ಬರುವುದಿಲ್ಲ, ಆದರೆಒಟ್ಟು 8 ಕಾಮಗಾರಿಗಳ ಪೈಕಿ 7 ಕಾಮಗಾರಿಗಳನ್ನು ನಗರದಲ್ಲಿರುವ ರಸ್ತೆಗಳ ಅಭಿವೃದ್ಧಿಗೆಅನುದಾನಅನುಮೋದನೆಒಪ್ಪಿಗೆಕೊಟ್ಟಿರುವುದು ಸರಿಯೇ?ಎಂದು ಸುದ್ದಿಗೋಷ್ಠಿಯಲ್ಲಿಅವರು ಆರೋಪಿಸಿದರು.
ಅಪೆಂಡಿಕ್ಸ್-ಇ 5054ರ ರಾಜ್ಯ ಹೆದ್ದಾರಿ ಸುಧಾರಣೆ ಅಡಿ ಮೂರು ಕಾಮಗಾರಿಗಳು ಕೈಗೆತ್ತಿಗೊಂಡಿದ್ದು, ಮೂರು ಕಾಮಗಾರಿಗಳು ಯಾವುದೇರಾಜ್ಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಒಳಪಡುವುದಿಲ್ಲ ಎಂದರು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಪಕ್ಷದ ನಾಯಕರೊಂದಿಗೆ ಹೋರಾಟ ಮಾಡಲು ಮುಂದಾಗುತ್ತೇವೆಎಂದರು.