ಬಿಜೆಪಿಯ ಹಿರಿಯ ಮುಖಂಡ ಹೇಮಂತ್ ಶಹಾ, ಪೈಕೋಡಿ ಜೆಡಿಎಸ್ ತೆಕ್ಕೆಗೆ

0
274

ಸೇಡಂ: ಬಿಜೆಪಿ ಹಿರಿಯ ಮುಖಂಡರಾದ ಹೇಮಂತ್ ಶಹಾ ಹಾಗೂ ಹಿರಿಯ ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ ಪೈಕೋಡಿ ಬಟಗೇರಾ ಅವರು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಸಮಕ್ಷಮ ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

Contact Your\'s Advertisement; 9902492681

ಹಿರಿಯ ರಾಜಕೀಯ ಮುತ್ಸದ್ದಿಯ ಗರಡಿಯಲ್ಲಿ ಪಳಗಿದ ಅವರ ಪರಮಾಪ್ತರಲ್ಲಿ ಒಬ್ಬರಾದ ಹೇಮಂತ ಶಹಾ ಹಾಗೂ ಹಿರಿಯ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನರೆಡ್ಡಿ ಪೈಕೋಡಿ ಅವರು ಜೆಡಿಎಸ್ ಸೇರಿರುವುದು ಮತ್ತಷ್ಟು ಬಲ ತುಂಬಿದಂತಾಗಿದೆ ಎಂದು ಇದೇ ವೇಳೆ ಬಾಲರಾಜ ಗುತ್ತೇದಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಚಿಂಚೊಳಿ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪೂರ, ಬಾಲರಾಜ ಬ್ರಿಗೇಡ್ ಅಧ್ಯಕ್ಷ ಶಿವಕುಮಾರ ಅಪ್ಪಾಜಿ, ಜೆಡಿಎಸ್ ಚಿಂಚೋಳಿ ಯುವ ಘಟಕ ಅಧ್ಯಕ್ಷ‌ ರಾಹುಲ ಯಾಕಾಪೂರ ಇತರರು ಈ ವೇಳೆ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here