ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುಗಡೆ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಗೋಂಡ ಪರ್ಯಾಯ ಪದ ಕುರುಬ ಎಸ್ಟಿಗೆ ಸೇರಿಸಲು ಒತ್ತಾಯಿಸಿ 4ನೇ ದಿನದ ಅನಿರ್ಧಿಷ್ಟ ಧರಣಿಯಲ್ಲಿ ಕೊಲಿ ಸಮಾಜದ ಮುಖಂಡ ಬಸವರಾಜ ಬುದಿಹಾಳ ಮಾತನಾಡಿದರು.
ತಳವಾರ ಮತ್ತು ಕೊಲಿ ಸಮಾಜದ ಮುಖಂಡರಾದ ಡಾ.ಸರ್ದಾರ ರಾಯಪ್ಪ, ಸಂತೋಷ ತಳವಾರ, ರೇವಣಸಿದ್ದಪ್ಪಗೌಡ ಎಮ್ ಕಮಾನಿಮನಿ, ಗೀರಿಶ ತುಂಬಗಿ ಸೇರಿದಂತೆ ಅನೇಕ ಸಮಾಜದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪಧಾಧಿಕಾರಿಗಳು ಧರಣಿಯಲ್ಲಿ ಪಾಲಗೋಂಡರು.