ಕಲಬುರಗಿ : ಕುರುಬ ಸಮಾಜವನ್ನು ಎಸ್ಟಿ ಗೆ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.
ಶ್ರೀ ಸಿದ್ದರಾಮ ನಂದ ಮಹಾಸ್ವಾಮಿಗಳು, ರವಿಕುಮಾರ್, ಡಾ. ಉಮೇಶ ಜಾಧವ, ದತ್ತಾತ್ರೇಯ ಪಾಟೀಲ ರೇವೂರ, ಶಶೀಲ ನಮೋಶಿ, ಕುರುಬ ಸಮಾಜದ ಶ್ರೀಗಳು, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಭಗವಂತರಾಯ ಪೂಜಾರಿ, ಗಣಪತಿ ಮಿಣಜಗಿ, ಡಾ.ಬಾಬು ಪೂಜಾರಿ, ರವಿಗೋಂಡ ಕಟ್ಟಿಮನಿ, ತಿಪ್ಪಣ್ಣ ಬಳಬಟ್ಟಿ, ದೇವಿಂದ್ರಪ್ಪ ನಾಯಿಕೋಡಿ, ಮಲ್ಲು ದಂಡಿನ್ ಸುರಪುರ, ಗಿರೆಪ್ಪ ಕಟ್ಟಮನಿ, ವೈಜನಾಥ ಸೇರಿದಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಪಧಾಧಿಕಾರಿಗಳು ಧರಣಿಯಲ್ಲಿ ಪಾಲಗೋಂಡರು.