ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ

0
17

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಜಿ ಅವರ ವಿರುದ್ಧ ನೇರವಾಗಿ ಸರ್ಕಾರ ಪಿತೂರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಯಾಕೆಂದರೆ ಬಿಜೆಪಿ ಸರ್ಕಾರದಲ್ಲಿ ನಡೆಸಿರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಒಂದೊಂದಾಗಿ ಪ್ರಕರಣಗಳು ಸಾರ್ವಜನಿಕವಾಗಿ ಬಯಲಿಗೆ ತರುತ್ತಿರುವುದರಿಂದ ಈ ರಾಜ್ಯದ ಸಾರ್ವಜನಿಕರ ದೃಷ್ಟಿ ಬೇರೆ ಕಡೆಗೆ ಸೆಳೆಯಲು ಕುತಂತ್ರ ನಡೆಸುತ್ತಿದೆ ಎಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ ತಾರಫೈಲ್ ಅವರು ಹೇಳಿದರು.

ಈ ಸರ್ಕಾರ ಸಾರ್ವಜನಿಕವಾಗಿ ಮುಜುಗರಕೆ ಒಳಗಾಗಿದೆ ಇದರಿಂದ ಸರ್ಕಾರ ಹಾಗೂ ಆರ್ ಎಸ್ ಎಸ್ ಸಂಘಟನೆ ಅವರು ಹೇಗಾದರೂ ಮಾಡಿ ಅವರ ಮನಸ್ಸು ಕುಗ್ಗುವಂತೆ ಮಾಡಿ ಈ ಸರ್ಕಾರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಚಾರಕ್ಕೆ ಬಾರದ ರೀತಿಯಲ್ಲಿ ಸಂಚುರೂಪಿಸಿದ್ದಾರೆ ಆದರೆ ಸರ್ಕಾರ ಹಾಗೂ ಆರ್ ಎಸ್ ಎಸ್ ಸಂಘಟನೆ ಎಷ್ಟೇ ಸಂಚುರೂಪಿಸಿದರು ಸಹ ಪ್ರಿಯಾಂಕರಿಗೆ ಅವರ ಮನಸ್ಸು ಕುಗ್ಗುವುದಿಲ್ಲ ಅವರು ಸಾರ್ವಜನಿಕ ವಲಯದಲ್ಲಿ ಪ್ರತಿಕ್ಷಣವೂ ಜನಸೇವೆಯಲ್ಲಿ ಇರುವಂತ ನಾಯಕರು ಈ ತರಹದ ಯಾವುದೇ ಕುತಂತ್ರಗಳಿಗೆ ಬಗ್ಗುವಂತ ನಾಯಕನಲ್ಲ ಈ ಸರ್ಕಾರದಲ್ಲಿ ವಿರೋಧ ಪಕ್ಷ ನಾಯಕರ ಬಾಯಿ ಮುಚ್ಚಿವಂತಹ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಬಿಜಪಿ ಸರಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ. ಮಹಾತ್ಮ ಗಾಂಧಿಯನ್ನು ಕೊಂದಂತ ಗೂಡ್ಸೆ ಪ್ರವೃತ್ತಿಯನ್ನು ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಪ್ರಯತ್ನಿಸುತ್ತಿದೆ ಇದೇ ರೀತಿ ಮುಂದುವರೆದರೆ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವ ಮುಖಾಂತರ ಪ್ರತಿಭಟನೆ ಮಾಡಲಾಗುತ್ತದೆ ಆದಕಾರಣ ಪೆÇಲೀಸ್ ಇಲಾಖೆ ಪ್ರಕರಣ ದಾಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಶಾಂತತೆಯನ್ನು ಕಾಪಾಡಬೇಕು ಎಂದು ಒತ್ತಾಸಿದ್ದಾರೆ.

ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರು ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಯಾಕೆಂದರೆ ಚಿತ್ತಾಪುರ ಕ್ಷೇತ್ರದ ಜನ ಅಭಿವೃದ್ಧಿಪರ ಇರುವಂತ ಜನ ವಿದ್ಯಾವಂತರು ಬುದ್ಧಿವಂತರು ಇದ್ದಾರೆ ಹಾಗಾಗಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಲಿಂಗರಾಜ ತಾರಫೈಲ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here