ಶಹಾಬಾದ: ನಗರದ ಅಂಬೇಡ್ಕರ ವೃತ್ತದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಕಮಿಟಿ, ಎಸ್ಸಿ/ಎಸ್ಟಿ ಘಟಕ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ ಮಾತನಾಡಿ, ನೇರ ನುಡಿಯ ಮತ್ತು ನುಡಿದಂತೆ ನಡೆವ ಪ್ರಬುದ್ಧ ರಾಜಕಾರಣಿ ಎಂದರೆ ಪ್ರಿಯಾಂಕ್ ಖರ್ಗೆ.ಅವರು ಚಿಕ್ಕವಯಸ್ಸಿನಲ್ಲಿಯೇ ಪಕ್ಷದ ಸಂಘಟನೆ ಕೈಗೊಂಡು ಶಾಸಕ, ಸಚಿವರಾಗಿ ಕೆಲಸ ಮಾಡುವ ಸಮಯದ ಒದಗಿ ಬಂದಿದೆ.ಸಚಿವರಾಗಿ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಸೈ ಎನಿಸಿಕೊಂಡಿದ್ದಾರೆ. ತಮಗೆ ಅಧಿಕಾರ ನೀಡಿದ ಚಿತ್ತಾಪೂರ ಮತಕ್ಷೇತ್ರದ ಮತದಾರರ ಮನವನ್ನು ಗೆದ್ದು, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಚಿತ್ತಾಪೂರ ತಾಲೂಕಿನ ಚಿತ್ರಣವನ್ನೇ ಬದಲಿಸಿದ್ದಾರೆ.ವ್ಯಯಕ್ತಿಕ ಕೆಲಸಗಳಿಗೆ ಮಾನ್ಯತೆ ನೀಡದೇ ಸಾರ್ವಜನಿಕರ ಹಾಗೂ ಗ್ರಾಮದಲ್ಲಿ ಬೇಕಾದ ಕೆಲಸಗಳ ಬಗ್ಗೆ ಕೇಳುವಂತ ಪ್ರಬುದ್ಧ ರಾಜಕಾರಣಿ ಅವರಾಗಿದ್ದಾರೆ ಎಂದರು.
ಮುಖಂಡರಾದ ಶರಣಗೌಡ ಪಾಟೀಲ ಗೋಳಾ,ವಿಶ್ವರಾಧ್ಯ ಬೀರಾಳ, ಡಾ.ಜಹೀರ್, ಮೃತ್ಯುಂಜಯ್ ಹಿರೇಮಠ,ಸಾಹೇಬಗೌಡ ಬೋಗುಂಡಿ, ಕುಮಾರ ಚವ್ಹಾಣ, ಕಾಂಗ್ರೆಸ್ ಪಕ್ಷದ ಎಸ್ಸಿ/ಎಸ್ಟಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ್, ಹಾಗ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣಕುಮಾರ ಚವ್ಹಾಣ, ಹಾಷಮ್ ಖಾನ, ಕೃಷ್ಣಪ್ಪ ಕರಣಿಕ್,ಶಂಕರ ಕುಸಾಳೆ, ಕಿಶನ ನಾಯಕ,ಶರಣು ಪಗಲಾಪೂರ,ಹರೀಶ ಕರಣಿಕ್,ನಿಂಗಣ್ಣ ಸಂಗಾವಿಕರ್, ಅನ್ವರ ಪಾಷಾ, ಡಾ.ಅಹ್ಮದ್ ಪಟೇಲ್, ಮರಲಿಂಗ ಕಮರಡಗಿ, ಸೂರ್ಯಕಾಂತ ಕೋಬಾಳ,ನಾಗೇಂದ್ರ ನಾಟೇಕಾರ,ಸಯ್ಯದ್ ಜಹೀರ್, ಮಹ್ಮದ್ ಅಜರ್, ಜಾವೀದ್, ಮೇರಾಜ ಸಾಹೇಬ,ಶಂಕರ ಕುಸಾಳೆ, ಸೇರಿದಂತೆ ಅನೇಕರು ಹಾಜರಿದ್ದರು.