ಕಲಬುರಗಿ: ಇಲ್ಲಿನ ಗುಬ್ಬಿ ಎಜುಕೇಷನ್ ಟ್ರಸ್ಟ್ ವತಿಯಿಂದ ಪ್ರಕಟಗೊಂಡಿರುವ ಹಿರಿಯ ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ವಿರಚಿತ ವೈದ್ಯಾಮೃತ ಹಾಗೂ ಸಮಾಜ ದರ್ಶನ ಕೃತಿಗಳ ಲೋಕಾರ್ಪಣೆ, ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ನ.25ರಂದು ಬೆಳಗ್ಗೆ 10.30ಕ್ಕೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಹಿರೇಮಠ ತಿಳಿಸಿದರು.
ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಸಂಸ್ಥಾನದ ಡಾ. ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ನಿರ್ದೇಶಕ ಸಿ.ಎನ್. ಮಂಜುನಾಥ ಕೃತಿಗಳ ಜನಾರ್ಪಣೆ ಮಾಡಲಿದ್ದಾರೆ.
ಸಂಸದ ಡಾ. ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಖ್ಯಾತ ವೈದ್ಯ ಡಾ. ಪಿ.ಎಸ್. ಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ. ಡ. ಎಸ್.ಎಸ್. ಗುಬ್ಬಿ ಉಪಸ್ಥಿತರಿರಲಿದ್ದಾರೆ. ವಿಜಯಲಕ್ಷ್ಮೀ ಕೆಂಗನಾಳ ಅವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬಿ.ಎಚ್. ನಿರಗುಡಿ, ಸಿದ್ಧರಾಮ ಹೊನ್ಕಲ್, ಡಾ. ಆನಂದ ಸಿದ್ದಾಮಣಿ, ಡಾ. ಎಸ್.ಎಸ್. ಗುಬ್ಬಿ ಇದ್ದರು.