ವಚನಾಧರಿತ ಸ್ಪರ್ಧೆ ಡಿ.7 ರಂದು

0
16

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ಸಮೃದ್ಧಿ ಫೌಂಡೇಶನ್‍ಗಳ ಸಹಯೋಗದೊಂದಿಗೆ 15 ವರ್ಷದೊಳಗಿನ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ವಚನಾಧರಿತ ವಚನ ಕಂಠ ಪಾಠ, ಚಿತ್ರಕಲೆ, ಭಾಷಣ. ಪ್ರಬಂಧ ಸ್ಪರ್ಧೆ ಹೀಗೆ ಮುಂತಾದ ಸ್ಪರ್ಧೆಗಳನ್ನು ಡಿ.7 ರಂದು ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಇಂದಿನ ಮಕ್ಕಳು ನಿತ್ಯ ವಚನ ಕಂಠಪಾಠ ಮಾಡುವ ಮೂಲಕ ವಚನ ಸಂಸ್ಕøತಿಯನ್ನು ಬೆಳೆಸಬೇಕಾಗಿದೆ. ವಚನಗಳು ಶರಣರ ಅಂತರಂಗದ ಮಾತುಗಳಾಗಿದ್ದು, ಅವುಗಳಿಗೆ ಬಹಿರಂಗವನ್ನು ಶುದ್ಧಿಕರಿಸುವ ಶಕ್ತಿಯೂ ಸಹ ಇದೆ. ಸಮಾನತೆಯ ಸಮಾಜ ನಿಮಾಣದ ಕ್ರಾಂತಿಯನ್ನು ನಾವಿಮದು ಮುಂದುವರೇಸಬೇಕಾಗಿದೆ. ಹಾಗಾಗಿ ಇಂಥ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ-ಮೊ. 9880349025 ಗೆ ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here